Breaking News
Home / ಜಿಲ್ಲೆ / ಬೆಳಗಾವಿ / ಈ ಬಾರಿ ಕಿತ್ತೂರು ಉತ್ಸವದ complete details

ಈ ಬಾರಿ ಕಿತ್ತೂರು ಉತ್ಸವದ complete details

Spread the love

ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ಉತ್ಸವವು ಅ.೨೩ ಹಾಗೂ ೨೪ ರಂದು ಜರುಗಲಿದೆ. ಈ ಬಾರಿ ಕಿತ್ತೂರು ಉತ್ಸವದ (೨೫ ವರ್ಷ) ಬೆಳ್ಳಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅ.೨೩ ರಂದು ಕಿತ್ತೂರಿನ ಕೋಟೆ ಆವರಣದಲ್ಲಿ ಸಾಯಂಕಾಲ ೭ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಜಲ ಸಂಪನ್ಮೂಲ (ಬೃಹತ್ ಮತ್ತು ಮಧ್ಯಮ ನೀರಾವರಿ) ಸಚಿವರಾದ ಗೋವಿಂದ ಕಾರಜೋಳ ಅವರು “ಕಿತ್ತೂರು ಸಂಸ್ಥಾನದ ಇತಿಹಾಸ ಮತ್ತು ಸಂಸ್ಕೃತಿ ” ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.
ವಿಶೇಷ ಆಮಂತ್ರಿತರಾಗಿ ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ, ಜೀವಶಾಸ್ತ್ರ ಮತ್ತು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರಗೇಶ್ ನಿರಾಣಿ, ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನೀಲ್ ಕುಮಾರ್ ಅವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರು ವಹಿಸುವರು.

ಕಾಕತಿಯಲ್ಲಿ ಮೂರ್ತಿ ಪೂಜೆ:
ಅ.೨೩ ರಂದು ರಾಣಿ ಚನ್ನಮ್ಮನ ತವರೂರು ಕಾಕತಿಯಲ್ಲಿ ಬೆಳಿಗ್ಗೆ ೮:೩೦ಕ್ಕೆ ಮೂರ್ತಿ ಪೂಜೆ ನೇರವೇರಲಿದೆ. ಕಾಕತಿಯ ಶಿವಪೂಜಾಮಠದ ಶ್ರೀ ರಾಚಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮಗಳು:
ಅ.೨೩ ರಂದು ಕಿತ್ತೂರಿನ ಗಡಾದಮರಡಿಯಲ್ಲಿ ಬೆಳಿಗ್ಗೆ ೯ ಗಂಟೆಗೆ ಜಿಲ್ಲಾಧಿಕಾರಿ ಹಾಗೂ ಕಿತ್ತೂರು ಉತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಜಿ.ಹಿರೇಮಠ ಅವರು ಉದ್ಘಾಟನಾ ಧ್ವಜಾರೋಹಣ ನೇರವೆರಿಸಲಿದ್ದಾರೆ.
ನಂತರ, ಬೆಳಿಗ್ಗೆ ೧೦ ಗಂಟೆಗೆ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಚನ್ನಮ್ಮ ವಿಜಯಜ್ಯೋತಿ ಬರಮಾಡಿಕೊಳ್ಳಲಾಗುವುದು ಹಾಗೂ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಲಾಗುವುದು. ಜಲ ಸಂಪನ್ಮೂಲ (ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಬಳಿಕ, ಬೆಳಿಗ್ಗೆ ೧೦:೩೦ ಕ್ಕೆ ಜಾನಪದ ಕಲಾವಾಹಿನಿ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನೀಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಅವರು ಉಪಸ್ಥಿತರಿರುವರು.
ಬೆಳಿಗ್ಗೆ ೧೧ ಗಂಟೆಗೆ ಕಿತ್ತೂರಿನ ಕೆ.ಎನ್.ವ್ಹಿ. ಪ್ರೌಢ ಶಾಲೆಯ ಆವರಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರಗೇಶ್ ನಿರಾಣಿ ಅವರು ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಅ.೨೪ ರಂದು ಗೋಷ್ಠಿಗಳು:
ಅಕ್ಟೋಬರ್ ೨೪ (ರವಿವಾರ) ಕಿತ್ತೂರು ರಾಣಿ ಚನ್ನಮ್ಮನ ಚರಿತ್ರೆ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಕಿತ್ತೂರಿನ ಕೋಟೆ ಆವರಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಗೋಷ್ಠಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಿತ್ತೂರಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಗೋಷ್ಠಿ ಉದ್ಘಾಟಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಿಗ್ಗೆ ೧೧ ಗಂಟೆಗೆ ರಾಣಿ ಚನ್ನಮ್ಮನ ಕಥೆಯ ರೂಪಕ, ರಾಣಿ ಚನ್ನಮ್ಮನ ಕೌಟುಂಬಿಕ ಜೀವನ, ರಾಣಿ ಚನ್ನಮ್ಮ ಮತ್ತು ಸರದಾರ ಗುರುಸಿದ್ದಪ್ಪ,ರಾಣಿ ಚನ್ನಮ್ಮ ಮತ್ತು ಬಿಚಗತ್ತಿ ಚನ್ನಬಸಪ್ಪ ಕುರಿತು ಗೋಷ್ಠಿ ನಡೆಯಲಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅಶೋಕ ಚಂದರಗಿ ಅವರು ಈ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಿಗ್ಗೆ ೧೨ ಗಂಟೆಗೆ ರಾಣಿ ಚನ್ನಮ್ಮನ ಕಿತ್ತೂರು ಸಂಸ್ಥಾನ ಹಾಗೂ ಬೆಳವಡಿ,ಜಮಖಂಡಿ ಪಠವರ್ಧನ ಸಂಸ್ಥೆಯ ಸಂಬಂಧಗಳು, ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ , ರಾಣಿ ಚನ್ನಮ್ಮನ ಪೂರ್ವಜರ ಚರಿತ್ರೆ ಕುರಿತು ಗೋಷ್ಠಿ ನಡೆಯಲಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಯ.ರು.ಪಾಟೀಲ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ೧ ಗಂಟೆಗೆ ೩ ನೆಯ ಗೋಷ್ಠಿ ಆರಂಭಗೊಳ್ಳಲಿದೆ. ವಿದೇಶಿ ದಾಖಲೆಗಳಲ್ಲಿ ಚನ್ನಮ್ಮ, ರಾಣಿ ಚನ್ನಮ್ಮ ಹಾಗೂ ಆಕೆಯ ಮಕ್ಕಳು ಮತ್ತು ಪತಿರಾಯ ಮಲ್ಲಸರ್ಜ ಅರಸ, ರಾಣಿ ಚನ್ನಮ್ಮನ ಮತ್ತು ಬ್ರಿಟಿಷರ ಯುದ್ಧ ಸೈನ್ಯ ದಳಗಳ ಕುರಿತು ಗೋಷ್ಠಿ ನಡೆಯಲಿದೆ.
ಡಾ. ಅರವಿಂದ ಯಾಳಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ೨:೩೦ ಗಂಟೆಗೆ ರಾಣಿ ಚನ್ನಮ್ಮ ಮತ್ತು ಬ್ರಿಟಿಷ್ ದಾಖಲೆಗಳು, ರಾಣಿ ಚನ್ನಮ್ಮ ಮತ್ತು ಬ್ರಿಟಿಷ್ ಸೆರೆಯಾಳುಗಳು ಮುಂತಾದ ವಿಷಯಗಳ ಕುರಿತು ಗೋಷ್ಠಿ ನಡೆಯಲಿದೆ. ಡಾ.ಐ.ಕೆ.ಪತ್ತಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ೩:೩೦ ಗಂಟೆಗೆ ರಾಣಿ ಚನ್ನಮ್ಮ ಮತ್ತು ಚಾಪ್ಲಿನ್, ರಾಣಿ ಚನ್ನಮ್ಮ ಮತ್ತು ಅರಮನೆಯ ಖಜಾನೆ, ರಾಣಿ ಚನ್ನಮ್ಮ ಮತ್ತು ಅಮಟೂರು ಬಾಳಪ್ಪ ವಿಷಯಗಳ ಕುರಿತು ಗೋಷ್ಠಿ ನಡೆಯಲಿದೆ. ಜ್ಯೋತಿ ಕಾಲೇಜಿನ ಪ್ರಾಧ್ಯಾಪಕರಾದ ರಾಮಕೃಷ್ಣ ಮರಾಠೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಯಂಕಾಲ ೪:೩೦ ಗಂಟೆಗೆ ರಾಣಿ ಚನ್ನಮ್ಮ ಮತ್ತು ಥ್ಯಾಕರೆ, ಜಾನಪದ ಸಾಹಿತ್ಯದಲ್ಲಿ ಚನ್ನಮ್ಮ, ಮೋಡಿ ದಾಖಲೆಗಳಲ್ಲಿ ಚನ್ನಮ್ಮನ ಚರಿತ್ರೆ ವಿಷಯಗಳ ಕುರಿತು ಗೋಷ್ಠಿ ನಡೆಯಲಿದೆ.
ಡಾ. ಶಿಲಾಧರ ಮುಗಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಯಂಕಾಲ ೫:೩೦ ಗಂಟೆಗೆ ರಾಣಿ ಚನ್ನಮ್ಮನ ಆಳ್ವಿಕೆಯ ಕಾಲದ ವ್ಯಾಪಾರ ಮತ್ತು ವಾಣಿಜ್ಯೋದ್ಯಮ, ಚನ್ನಮ್ಮನ ಕಾಲದ ಶಸ್ತ್ರಾಸ್ತ್ರಗಳು ಮತ್ತು ಉಡುಪುಗಳು, ಆಭರಣಗಳು ಹಾಗೂ ರಾಜಚಿನ್ಹೆಗಳು ಕುರಿತು ಗೋಷ್ಠಿ ನಡೆಯಲಿದೆ. ಡಾ. ಸ್ಮಿತ ಸುರೇಬಾನಕರ ಅಧ್ಯಕ್ಷತೆ ವಹಿಸಲಿದ್ದಾರೆ.

ವಿವಿಧ ಕ್ರೀಡಾ ಕಾರ್ಯಕ್ರಮಗಳ ಆಯೋಜನೆ:
ಅಕ್ಟೋಬರ್ ೨೪ (ರವಿವಾರ) ಬೆಳಿಗ್ಗೆ ೭ ಗಂಟೆಗೆ ಚನ್ನಮ್ಮ ವೃತ್ತದ ಬಳಿ ಪುರುಷ ಹಾಗೂ ಮಹಿಳೆಯರಿಗಾಗಿ ಸೈಕ್ಲಿಂಗ್ ಆಯೋಜಿಸಲಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಉಳವಪ್ಪಾ ಉಳ್ಳಿಗಡ್ಡಿ ಅವರು ಉದ್ಘಾಟಿಸಲಿದ್ದಾರೆ.
ಬಳಿಕ, ಬೆಳಿಗ್ಗೆ ೧೧ ಗಂಟೆಗೆ ಪುರುಷ ಹಾಗೂ ಮಹಿಳೆಯರಿಗಾಗಿ ಮುಕ್ತ ವಾಲಿಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಿನ್ನಪ್ಪ ಮುತ್ನಾಳ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ೧೨ ಗಂಟೆಗೆ ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ಮೈದಾನದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಆರ್.ವಾಯ್. ಪರವಣ್ಣವರ ಅವರು ಉದ್ಘಾಟಿಸಲಿದ್ದಾರೆ.

ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭವು ಅ.೨೪ ರಂದು ಸಂಜೆ ೭ ಗಂಟೆಗೆ ಜರುಗಲಿದೆ. ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮತ್ತು ಕರ್ನಾಟಕ ವಿಧಾನ ಸಭೆಯ ಉಪಸಭಾಧ್ಯಕ್ಷರಾದ ವಿಶ್ವನಾಥ ಮಾಮನಿ ಉಪಸ್ಥಿತರಿರುವರು.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯಸಭೆ ಸದಸ್ಯರಾದ ಈರಣ್ಣಾ ಕಡಾಡಿ, ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಶಾಸಕರಾದ ಹಣಮಂತ ನಿರಾಣಿ ಆಗಮಿಸಲಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಎಂ. ರಾಮಚಂದ್ರ ಗೌಡ ಸಮಾರೋಪ ನುಡಿಗಳಾನ್ನಡಲಿದ್ದಾರೆ.
ಬಳಿಕ, ರಾತ್ರಿ ೯:೧೫ ರಿಂದ ಖ್ಯಾತ ಚಲನಚಿತ್ರಗಳ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಕಿತ್ತೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ೨೩, ೨೪ ರಂದು ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳು
೨೦೨೧ ನೇ ಸಾಲಿನ ಕಿತ್ತೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ಶನಿವಾರ (ಅ.೨೩) ಬೆಳಿಗ್ಗೆ ೧೧ ರಿಂದ ರಾತ್ರಿ ೧೨.೩೦ ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪಟ್ಟಿ ಈ ಕೆಳಗಿನಂತಿದೆ.
೨೩ ರಂದು ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳು
೧. ಭಜನಾ ಪದ ಇಂಚಲದ ಶಿವಾನಂದ ಭಾರತಿ ಭಜನಾ ಮಂಡಳಿ ಬೆಳಿಗ್ಗೆ ೧೧ ರಿಂದ ೧೧.೧೦
೨. ಶ್ರೀ ಕೃಷ್ಣ ಪಾರಿಜಾತ ಬಯಲಾಟ ಸಾಣಿಕೊಪ್ಪದ ಪವಾಡ ಬಸವೇಶ್ವರ ನಾಟ್ಯ ಸಂಘ ೧೧.೧೦ ರಿಂದ ೧೧.೨೦
೩. ಭಾವಗೀತೆ ಎಸ್ ಮುದಕನಗೌಡರ ೧೧.೨೦ ರಿಂದ ೧೧.೩೦
೪. ಭಜನಾ ಪದ ಬಸ್ಸಾಪೂರದ ಅಶೋಕ ಎಮ್ಮಿ ೧೧.೩೦ ರಿಂದ ೧೧.೪೦
೫. ಭರತನಾಟ್ಯ ಬೈಲಹೊಂಗಲದ ನೀಲಮ್ಮ ಜಗದೀಶ ಹಿರೇಮಠ ೧೧.೪೦ ರಿಂದ ೧೧.೫೦
೬. ಜಾನಪದ ಭಜನ ಬಸ್ಸಾಪೂರದ ಮಡಿವಾಳಪ್ಪ ಬಸವೆಣ್ಣೆಪ್ಪ ಪಾಟೀಲ ೧೧.೫೦ ರಿಂದ ೧೨
೭. ಕಾವ್ಯ ವರ್ಣ ಕಲೆ ಆನಂದ ಬಡಿಗೇರ್ ೧೨ ರಿಂದ ೧೨.೧೦
೮. ಭಜನಾ ಬಸ್ಸಾಪೂರದ ಈರಪ್ಪ ಫಕಿರಪ್ಪ ಬಬ್ಲಿ ೧೨.೧೦ ರಿಂದ ೧೨.೧೫
೯. ಗಾಯನ, ಬೈಲಹೊಂಗಲದ ಮೇಲೋಡಿಸ್ ಟೀಮ್ ೧೨.೧೫ ರಿಂದ ೧೨.೨೦
೧೦. ದೇಶ ಭಕ್ತಿ ಗೀತೆ ಧಾರವಾಡದ ಶ್ರೀ ಪುಟ್ಟರಾಜು ಕಲಾ ಸಂಘ ೧೨.೨೦ ರಿಂದ ೧೨.೩೦
೧೧. ಭಜನಾ ಮೈಲಾರಲಿಂಗೇಶ್ವರ ಭಜನಾ ಮಂಡಳಿ ೧೨.೩೦ ರಿಂದ ೧೨.೪೦
೧೨. ಮಿಮಿಕ್ರಿ ಕಿತ್ತೂರಿನ ಅನ್ನಪ್ಪ ಪಡೆಪ್ಪ ಬೋಗೂರ ೧೨.೪೦ ರಿಂದ ೧
೧೩. ಸಂಗೀತ ಪಂಕಜ .ನಾ. ಪರಸನಟ್ಟಿ ಹಾಗೂ ಶಿವಾನಂದ ಪರಸನಟ್ಟಿ ೧ ರಿಂದ ೧.೧೦
೧೪ ಭಜನಾ ಪದ ಬಚ್ಣನಕೇರಿಯ ಶ್ರೀ ಗ್ರಾಮದೇವಿ ಭಜನಾ ಮಂಡ ೧.೧೦ ರಿಂದ ೧.೨೦
೧೫ ಚೌಡಕಿ ಪದ ಮುಧೋಳದ ಯಮನವ್ವ ಕರೆಪ್ಪ ಬೇವಿನಗಿಡದ ಹಾಗೂ ತಂಡದವರಿಂದ ೧.೨೦ ರಿಂದ ೧.೩೦
೧೬ ಹಿಂದೂಸ್ತಾನಿ ಸಂಗೀತ ಬೆಳಗಾವಿಯ ಮಂದಾರ ಚಿಪಟ್ಟಿ ೧.೩೦ ರಿಂದ ೧.೪೦
೧೭ ನೃತ್ಯ ಕಿತ್ತೂರಿನ ಉಮಾದೇವಿ ಬಿಕ್ಕನ್ನವರ ೧.೪೦ ರಿಂದ ೧.೫೦
೧೮ ಶಾಸ್ತ್ರೀಯ ಸಂಗೀತ ಪುಲಿಕೇಶಿ ಗಿರಿಯಾಲ ೧.೫೦ ರಿಂದ ೨
೧೯ ಗೊಂದಲಿಗರ ಪದ ಬಾಗಲಕೋಟೆಯ ವೆಂಕಪ್ಪ ಅಂಬಾಜಿ ೨ ರಿಂದ ೨.೧೦
೨೦ ಭಜನಾ ರಾಮದುರ್ಗದ ಚೈತ್ರಾವತಿ ನೀಲಪ್ಪನವರ ೨.೧೦ ರಿಂದ ೨.೨೦
೨೧ ಭಾವಗೀತೆ ಕಪ್ಪಲಗುದ್ದಿಯ ಕುಮಾರ ಬಡಿಗೇರ ೨.೨೦ ರಿಂದ ೨.೩೦
೨೨ ಸಂಗೀತ ಧಾರವಾಡದ ಶಿವಕುಮಾರ ಹಿರೇಮಠ ೨.೩೦ ರಿಂದ ೨.೪೦
೨೩ ಭಜನಾ ಹಾಗೂ ಜನಪದ ವಿಜಯೇಂದ್ರ ಜೋಶಿ ಹಾಗೂ ತಂಡದವರಿಂದ ೨.೪೦ ರಿಂದ ೨.೫೦
೨೪ ಜನಪದ ಸಂಗೀತ ಲೋಕಾಪುರದ ಮಂಜುಳಾ ಸಂಬಾಳಮಠ ೨.೫೦ ರಿಂದ ೩
೨೫ ಜಾನಪದ ಭಜನೆ, ಬಸ್ಸಾಪೂರದ ಶ್ರೀ ಕರೆಮ್ಮಾ ದೇವಸ್ಥಾನ ಭಜನಾ ಮಂಡಳಿ ೩ ಗಂಟೆಯಿಂದ ೩.೧೦
೨೬ ಸುಗಮ ಸಂಗೀತ ಬೆಳಗಾವಿಯ ರಾಜಪ್ರಭು ದೊತ್ರೆ ಅವರಿಂದ ೩.೧೦ ರಿಂದ ೩.೨೦ ರ ವರೆಗೆ
೨೭ ಭರತನಾಟ್ಯ ಬಾಗಲಕೋಟೆಯ ಶ್ರೇಯಾ ಪ್ರಲ್ಹಾದ ಕುಲಕರ್ಣಿ ೩.೨೦ ರಿಂದ ೩.೩೦
೨೮ ತತ್ವಪದ ಬಸವರಾಜ ತಿಮ್ಮಾಪೂರ ಹಾಗೂ ತಂಡದವರಿಂದ ೩.೩೦ ರಿಂದ ೩.೪೦
೨೯ ಶಹನಾಯಿ ವಾದನ ಜಯಪುರದ ಗಿರಿಮಲ್ಲಪ್ಪ ಭಜಂತ್ರಿ ಅವರಿಂದ ೩.೫೦ ರಿಂದ ೪ ಗಂಟೆಯವರೆಗೆ
೩೦ ಯೋಗ ಪ್ರದರ್ಶನ, ಷ್ಟ್ರೀಯ ಯೋಗಪಟು ದನ್ವಿ ಮರೆವಂತೆ ಅವರಿಂದ ೪ ರಿಂದ ೪.೧೦
೩೧ ಭಜನಾ ಪದ, ಹೂಲಿಕಟ್ಟಿಯ ಶ್ರೀ ಗ್ರಾಮದೇವಿ ಭಜನಾ ಮಂಡಳಿ ವತಿಯಿಂದ ೪.೧೦ ರಿಂದ ೪.೨೦ ರ ವರೆಗೆ
೩೨ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಕಾರವಾರದ ಕುಮಾರಿ ಶ್ರೀಲಕ್ಷ್ಮೀ ಹೆಗಡೆ ಅವರಿಂz ೪.೨೦ ರಿಂದ ೪.೩೦ ಗಂಟೆಯವರೆಗೆ
೩೩ ಸಂಗೀತ ಕಾರ್ಯಕ್ರಮ, ಭಾರತಿ ಕಾಂಬಳೆ ಮತ್ತು ಸುಷ್ಮಾ ನಂದಗಾವಿ ಹಾಗೂ ತಂಡದವರಿಂದ ೪.೩೦ ರಿಂದ ೪.೪೦ ರ ವರೆಗೆ
೩೪ ಹಿಂದೂಸ್ತಾನಿ ಸ್ಯಾಕ್ಸೊಪೊನ ಕಾರ್ಯಕ್ರಮ ಗೋಕಾಕನ ಅಶೋಕ ಭಜಂತ್ರಿ ಅವರಿಂದ ೪.೪೦ ರಿಂದ ೪.೫೦ ಗಂಟೆಯವರೆಗೆ
೩೫ ನೃತ್ಯ ಕಾರ್ಯಕ್ರಮ ಚಿನ್ನು ವಸ್ತ್ರದ ಹಾಗೂ ತಂಡದವರಿಂದ ೪.೫೦ ರಿಂದ ೫ ಗಂಟೆಯವರೆಗೆ
೩೬ ಸಂಗೀತ ಕಾರ್ಯಕ್ರಮ ಬೆಳಗಾವಿಯ ತನುಜಾ .ಎಮ್. ಹಿರೇಮಠ ಹಾಗೂ ತಂಡದವರಿಂದ ೫ ರಿಂದ ೫.೧೦ ರ ವರೆಗೆ
೩೭ ಹಾಸ್ಯದ ಹೊನಲು ಕಾರ್ಯಕ್ರಮ ಸುಧಾ ಬರಗೂರ ಹಾಗೂ ತಂಡದವರಿಂದ ೫.೧೦ ರಿಂದ ೬.೧೦ ಗಂಟೆಯವರೆಗೆ
೩೮ ನೃತ್ಯ ವೈವಿಧ್ಯ ಕಾರ್ಯಕ್ರಮ, ಹುಬ್ಬಳ್ಳಿಯ ಕಲಾಸೃಷ್ಠಿ ನೃತ್ಯ ಹಾಗೂ ಸಂಸ್ಕ್ರತಿ ಸಂಸ್ಥೆ ವತಿಯಿಂದ ೬.೧೦ ರಿಂದ ೬.೨೦ ರ ವರೆಗೆ
೩೯ ಭರತನಾಟ್ಯ ಕಾರ್ಯಕ್ರಮ, ಬೆಳಗಾವಿಯ ರೇಖಾ ಹೆಗಡೆ ಹಾಗೂ ತಂಡದವರಿಂದ ೬.೨೦ ರಿಂದ ೬.೩೦ ರ ವರೆಗೆ
೪೦ ಕಾಳಿ ನೃತ್ಯ ಕಾರ್ಯಕ್ರಮ, ಕೇರಳದ ಕಾತ್ಯಾಯಿನಿ ತಂಡದವರಿಂದ ೬.೩೦ ರಿಂದ ೬.೫೦ ಗಂಟೆಯವರೆಗೆ
೪೧ , ಭರತನಾಟ್ಯ ಬೈಲಹೊಂಗಲದ ಕುಮಾರಿ ಪ್ರಿಯಾಂಕಾ ಕಳ್ಳಿಮನಿ ಅವರಿಂದ ೬.೫೦ ರಿಂದ ೭ ಗಂಟೆಯವರೆಗೆ
೪೨ ಉದ್ಘಾಟನಾ ಸಮಾರಂಭ ೭ ರಿಂದ ೮ ಗಂಟೆಯವರೆಗೆ
೪೩ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಹುಬ್ಬಳ್ಳಿಯ ಲಕ್ಷ್ಮೀ ಗುಡಿ ಅವರಿಂದ ೮ ರಿಂದ ೮.೧೦ ರ ವರೆU
೪೪ ವೀರರಾಣಿ ಕಿತ್ತೂರು ಚೆನ್ನಮ್ಮನ ಸ್ವಾತಂತ್ರ್ಯ ಹೋರಾಟ ಸಂಗ್ರಾಮ” ದೃಶ್ಯ ಕಾವ್ಯ ರೂಪಕ ಸತ್ತರೆ ವೀರಸ್ವರ್ಗ ಗೆದ್ದರೆ ಸ್ವಾತಂತ್ರ!! ಬೆಂಗಳೂರಿನ ಖ್ಯಾತ ಚಲನಚಿತ್ರ/ ಕಿರುತೆರೆ ಕಲಾವಿದರು , ದೃಶ್ಯ ಸಂಯೋಜನೆ ಹರೀಶ್ ಪ್ರಭಾತ, ನಿರ್ದೇಶನ : ಯಶವಂತ ಸರ್ ದೇಶಪಾಂಡೆ ಅವರಿಂದ ೮.೧೦ ರಿಂದ ೮.೪೦ ರ ವರೆಗೆ
೪೫ ಸಂಗೀತ ಸಿಂಚನ ಕಾರ್ಯಕ್ರಮ, ಬೆಂಗಳೂರಿನ ರುಮಿತ್ .ಕೆ.ಶರಣ ಮ್ಯೂಸಿಕ್ ಅಕಾಡೆಮಿ ತಂಡದವರಿಂದ ೮.೪೦ ರಿಂದ ೯.೪೦ ಗಂಟೆಯವರೆಗೆ
೪೬ ಏಕವ್ಯಕ್ತಿ ನಾಟಕ ರಚನೆ, ಬೆಂಗಳೂರಿನ ಡಾ. ಬೆಲೂರ ರಘುನಂದನ ಗೋಕುಲ ಸಹೃದಯ ನಿರ್ದೇಶನ – ಕೃಷ್ಣಮೂರ್ತಿ ಕವತಾರ ಅಭಿನಯಿಸುವ ಚಿಟ್ಟೆ ೯.೪೦ ರಿಂದ ೧೦.೪೦ ಗಂಟೆಯವರೆಗೆ
೪೭ ( ಕರ್ನಾಟಕ ರಾಜ್ಯದ ಎಲ್ಲ ಕಲೆಗಳ ಪ್ರದರ್ಶನ) ಮಂಗಳೂರಿನ ಸಂದೇಶ .ಕೆ. ಮತ್ತು ತಂಡದವರಿಂದ ಹೆಜ್ಜೆ- ಗೆಜ್ಜೆಗಳ ತೇರು ೧೦.೪೦ ರಿಂದ ೧೧.೪೦ ಗಂಟೆಯವರೆಗೆ
೪೮ ಹಾಸ್ಯಭರಿತ ಕಾರ್ಯಕ್ರಮ ಬೆಂಗಳೂರಿನ ಜೀ ಕನ್ನಡ ಕಲಾವಿದರಿಂದ ೧೧.೪೦ ರಿಂದ ೧೨.೩೦ ಗಂಟೆಯವರೆಗೆ
೪೯ ಬಯಲಾಟ ಪ್ರದರ್ಶನ ನಾಪುರದ ಶಂಕರ ಕುರೇರ ಹಾಗೂ ತಂಡದವರಿಂದ ೧೨.೩೦ ರಿಂದ

೨೦೨೧ನೇ ಸಾಲಿನ ಕಿತ್ತೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ರವಿವಾರ (ಅ.೨೪) ಮಧ್ಯಾಹ್ನ ೩ ರಿಂದ ರಾತ್ರಿ ೯:೧೫ ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

೨೩ ರಂದು ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳು

೧. ಶಹನಾಯಿ, ದೇವೆಂದ್ರ ಭಜಂತ್ರಿ ಅವರಿಂದ ಮಧ್ಯಾಹ್ನ ೩ ರಿಂದ ೩.೫ ಗಂಟೆಯವರೆಗೆ
೨. ಭಜನಾ ಪದ, ಬಯಲಾಟ ನಿಂಗಪ್ಪ ಶ್ರೀ ಶೈಲ ಶೆಟ್ಟರ- ಬಸ್ಸಾಪೂರ ಸಂಘಟನೆ ವತಿಯಿಂದ ೩.೫ ರಿಂದ ೩.೧೦ ರವರೆಗೆ
೩. ಭರತ ನಾಟ್ಯ ಕಿತ್ತೂರಿನ ಕುಮಾರಿ ಕೆ.ಪ್ರಿಯಾಂಕಾ ಅವರಿಂದ ೩.೧೦ ರಿಂದ ೩.೧೫ ರವರೆಗೆ
೪. ಮೂಗಿನಿಂದ ಕೊಳಲು ವಾದನ, ಹುಕ್ಕೇರಿಯ ಡಿ.ಆರ್.ನದಾಫ ಅವರಿಂದ ೩.೧೫ ರಿಂದ ೩.೨೦ ರವರೆಗೆ
೫. ಜಾನಪದ ಹಾಡು, ಪಾರ್ವತೆವ್ವ ಸಿದ್ದಪ್ಪ ಹೊಲಗ ಅವರಿಂದ ೩.೨೦ ರಿಂದ ೩.೩೦ ರವರೆಗೆ
೬. ಭಾವ್ಯಕ್ಯ ಜನಪದ, ಹುಬ್ಬಳ್ಳಿಯ ಇಮಾಮಸಾಬ ವಲ್ಲೇಪ್ಪನವರ ಅವರಿಂದ ೩.೩೦ ರಿಂದ ೩.೪೦ ರವರೆಗೆ
೭. ಸುಗಮ ಸಂಗೀತ, ನ್ನಾಳದ ಪಂಡಿತ ಪುಟ್ಟರಾಜ ಸಂಗೀತ ಕಲಾ ಸಂಸ್ಥೆಯ ವತಿಯಿಂದ ೩.೪೦ ರಿಂದ ೩.೫೦
೮. ಚೌಡಕಿ ಪದ ನಾಗವ್ವ ರಂಗಪ್ಪ ಖಾಸದಾರ ಅವರಿಂದ ೩.೫೦ ರಿಂದ ಸಂಜೆ ೪ ಗಂಟೆಯವರೆಗೆ
೯. ಜಾನಪದ ಸಂಗೀತ ಕಾರ್ಯಕ್ರಮಗಳು ಇಸ್ಮಾಯಿಲ್ ಫಿರಜಾದೆ ಮತ್ತು ಬೆಳಗಾವಿಯ ಜೂನಿಯರ್ ಶಿವರಾಜ್ ಕುಮಾರವರಿಂz ಸಂಜೆ ೪ ರಿಂದ ೪.೧೫ ಗಂಟೆಯವರೆಗೆ
೧೦. ಡೊಳ್ಳಿನ ಹಾಡು, ಕವಲಗುಡ್ಡದ ಅಮರೇಶ್ವರ ಮಹಾರಾಜರು ಅವರಿಂದ ಸಂಜೆ ೪.೧೦ ಗಂಟೆಯಿಂದ ೪.೨೦ ಗಂಟೆಯವರೆಗೆ
೧೧. ಸಂಗೀತ ವೈವಿಧ್ಯ, ಮಂಜುನಾಥ ಹೊಸವಾಳ ಅವರಿಂದ ಸಾಯಂಕಾಲ ೪.೩೦ ರಿಂದ ೪.೪೦
೧೨. ನೃತ್ಯ ರೀತಿ ಧಾರವಾಡದ ಕೃಷ್ಣಾ ಸಂಕೋಜಿ ಅವರಿಂz ೪.೪೦ ರಿಂದ ೪.೫೦
೧೩. ರಿದಮಿಕ್ ಯೋಗಾ, ಪಲ್ಲವಿ ಮುರಗೋಡ ಅವರಿಂದ ೪.೫೦ ರಿಂದ ೫ ಗಂಟೆಯವರೆಗೆ
೧೪ ನೃತ್ಯ ಪ್ರದರ್ಶನ, ಪ್ರಥಮೇಶ ಗಣೇಶ ವಾಘಮೋಡೆ ಅವರಿಂದ ಸಾಯಂಕಾಲ ೫ ರಿಂದ ೫.೧೦ ಗಂಟೆಯವರೆಗೆ
೧೫ ಸಂಗೀತ ಗಾಯನ ಡಾ.ಕೆ.ಎಂ.ರೋಹಿಣಿಯವರಿಂದ ಸಾಯಂಕಾಲ ೫.೧೦ ರಿಂದ ೫.೨೦ ರವರೆಗೆ
೧೬ ನೃತ್ಯ ವೈವಿಧ್ಯ, ವಿನೋದ ಮಾಸ್ಟರ್ ಹಾಗೂ ತಂಡದವರಿಂದ (ಜೀ ಕನ್ನಡ ಡಿಕೆಡಿ ಖ್ಯಾತಿಯ ಕಲಾವಿದರಿಂದ) ಸಾಯಂಕಾಲ ೫.೨೦ ರಿಂದ ೫.೪೦ ರವರೆಗೆ
೧೭ ನೃತ್ಯ ವೈವಿಧ್ಯ, ಬೆಳಗಾವಿಯ ಮೈತ್ರಿ ಲೇಡೀಸ್ ಆಫೀಸಸರ್ಸ್ ಕ್ಲಬ್ ವತಿಯಿಂದ ೫.೪೦ ರಿಂದ ೫.೫೦ ರವರೆಗೆ
೧೮ ಹಾಸ್ಯ ಕಾರ್ಯಕ್ರಮ, ಸುನೀಲ ಪತ್ರಿ, ಸಂಜಯಲ್ಲೇಶ ಕುಮಾರ ತಂಡದವರಿಂದ ೫.೫೦ ರಿಂದ ೬.೧೦ ರವರೆಗೆ
೧೯ ಜಾನಪದ ನೃತ್ಯ ಬಳ್ಳಾರಿಯ ಸೂರ್ಯ ಕಲಾ ಟ್ರಸ್ಟ್ ವತಿಯಿಂದ ೬.೧೦ ರಿಂದ ೬.೨೦
೨೦ ಸಂಗೀತ ಸಿಂಚನ, ಮಹನ್ಯ ಗುರು ಪಾಟೀಲ ಹಾಗೂ ಸಂಗಡಿಗರು (ಕಲರ್ಸ್ ಕನ್ನಡ ಖ್ಯಾತಿಯ ಕಲಾವಿದರಿಂದ) ೬.೨೦ ರಿಂದ ೬.೪೫ ರವರೆಗೆ
೨೧ ನೃತ್ಯ ರೂಪಕ ಬೈಲಹೊಂಗಲ ಸೌಭಾಗ್ಯ ಲಕ್ಷ್ಮೀ ಕೊಪ್ಪದ ಇವರಿಂದ ೬.೪೫ ರಿಂದ ೭ ಗಂಟೆಯವರೆಗೆ
೨೨ ಸಮಾರೋಪ ಸಮಾರಂಭ ರಾತ್ರಿ ೭ ರಿಂದ ೮ ಗಂಟೆಯವರೆಗೆ
೨೩ ನೃತ್ಯ, ಸೋನಿ ಟಿವಿ ಸೂಪರ್ ಡ್ಯಾನ್ಸರ್ ನ ಪ್ರತ್ವಿರಾಜ ಅ. ಕೊಂಗರೆ ಅವರಿಂದ ೮ ರಿಂದ ೮.೧೫ ರವರೆಗೆ
೨೪ ನಾಟಕ ರಾಜಣ್ಣ ಜೆವರ್ಗಿ ಹಾಗೂ ಹಾಗೂ ತಂಡದವರಿಂದ ೮.೧೫ ರಿಂದ ೯.೧೫ ರವರೆಗೆ
೨೫ ರಸಮಂಜರಿ ಕಾರ್ಯಕ್ರಮ ಖ್ಯಾತ ಚಲನಚಿತ್ರಗಳ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ ಹಾಗೂ ತಂಡದವರಿಂದ ೯.೧೫ ರಿಂದ


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ