Breaking News
Home / ಜಿಲ್ಲೆ / ಬೆಳಗಾವಿ / ಕಿತ್ತೂರು / ದನ ಕರುಗಳು ಸಜೀವ ದಹನವಾದ ಘಟನೆ ಕಿತ್ತೂರು ತಾಲೂಕಿನ ಎನ್ ತೇಗೂರು ಗ್ರಾಮದಲ್ಲಿ ನಡೆದಿದೆ.

ದನ ಕರುಗಳು ಸಜೀವ ದಹನವಾದ ಘಟನೆ ಕಿತ್ತೂರು ತಾಲೂಕಿನ ಎನ್ ತೇಗೂರು ಗ್ರಾಮದಲ್ಲಿ ನಡೆದಿದೆ.

Spread the love

ಕಿತ್ತೂರು: ಗುಡಿಸಿಲಿಗೆ ಬೆಂಕಿ ತಗುಲಿ ದನ ಕರುಗಳು ಸಜೀವ ದಹನವಾದ ಘಟನೆ ಕಿತ್ತೂರು ತಾಲೂಕಿನ ಎನ್ ತೇಗೂರು ಗ್ರಾಮದಲ್ಲಿ ನಡೆದಿದೆ.

ಎನ್ ತೇಗೂರು ಗ್ರಾಮದ ಶಿವರಾಯಪ್ಪ ಚಂದ್ರಪ್ಪ ಪಾಗಾದ ಎಂಬುವವರ ಹೊಲದಲ್ಲಿರುವ ಗುಡಿಸಲಿಗೆ ನಿನ್ನೆ ರಾತ್ರಿ ಆಕಸ್ಮೀಕ ಬೆಂಕಿ ಸುಮಾರು 3 ಲಕ್ಷ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದೆ. ಅಲ್ಲದೇ 2 ಹೋರಿ, 3 ಆಕಳು , 2 ಕರು, 1 ಕುರಿ ಸಜೀವ ದಹನವಾಗಿದೆ.

ಜೀವನಕ್ಕೆ ಆಧಾರವಾಗಿದ್ದ ದನ ಕರು ಸಾವನ್ನಪಿದ್ದು, ಎಲ್ಲವನ್ನು ಕಳೆದುಕೊಂಡ ರೈತ ಶಿವರಾಯಪ್ಪ ಆಕ್ರಂದನ ಮುಗಿಲು ಮುಟ್ಟಿದೆ‌.

ನೆರವಿನ ಹಸ್ತ ಚಾಚಿದ ಸಮಾಜ ಸೇವಕ ಹಬೀಬ್ ಶಿಲ್ಲೇದಾರ್:

ಘಟನಾ ಸ್ಥಳಕ್ಕೆ ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿ, ಸಮಾಜ ಸೇವಕ ಹಬೀಬ್ ಶಿಲ್ಲೇದಾರ್ ಬೇಟ್ಟಿ ನೀಡಿ ರೈತನಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ 25 ಸಾವಿರ ರೂ. ನೆರವು ನೀಡಿದರು.

ಈ ಸಂದಂಭ೯ದಲ್ಲಿ ಮಡಿವಾಳಯ್ಯ ಗುರುವೈನವರ, ಮಕಬೂಲ ಸನದಿ, ಅಡಿವೆಪ್ಪ ಕುರಿ, ಸುಭಾಸ ಹದ್ದನ್ನವರ, ಮೋನೇಶ ಪಾಗಾದ ಇದ್ದರು


Spread the love

About Laxminews 24x7

Check Also

ಬೆಳಗಾವಿ: ಡಿಸಿಪಿ ಹೆಸರಲ್ಲೇ ನಕಲಿ ಫೇಸ್‌ಬುಕ್‌ ಖಾತೆ

Spread the love ಬೆಳಗಾವಿ: ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ ಅವರ ಹೆಸರಲ್ಲಿ ನಕಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ