Home / ಜಿಲ್ಲೆ / ಅಪ್ರಾಪ್ತ ಬಾಲಕಿಗೆ ಪೋಷಕರು ಮದುವೆಫೇಸ್‍ಬುಕ್‍ನಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರಿಗೆ ಮದುವೆ ನಿಲ್ಲಿಸುವಂತೆ ಮನವಿ

ಅಪ್ರಾಪ್ತ ಬಾಲಕಿಗೆ ಪೋಷಕರು ಮದುವೆಫೇಸ್‍ಬುಕ್‍ನಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರಿಗೆ ಮದುವೆ ನಿಲ್ಲಿಸುವಂತೆ ಮನವಿ

Spread the love

ಮೈಸೂರು, ಜ.28- ನಗರದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಗೆ ಪೋಷಕರು ಮದುವೆ ನಿಶ್ಚಯ ಮಾಡಿರುವ ಮಾಹಿತಿ ಪಡೆದ ಜಯಪುರ ಠಾಣೆ ಪೊಲೀಸರು ಬಾಲಕಿ ಮನೆಗೆ ಖುದ್ದು ತೆರಳಿ ಪೋಷಕರಿಗೆ ಬುದ್ದಿವಾದ ಹೇಳಿ ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಯಸ್ಸಿಗೆ ಮದುವೆ ಇಷ್ಟವಿಲ್ಲವೆಂದು ಬಾಲಕಿ ಪೋಷಕರಿಗೆ ಹೇಳಿದ್ದರೂ ಮಗಳ ಮಾತನ್ನು ಲೆಕ್ಕಿಸದೆ ಇದೇ 31ರಂದು ಮದುವೆ ನಿಶ್ಚಯಮಾಡಿದ್ದರು.  ಬಾಲಕಿ ಬೇರೆ ದಾರಿಯಿಲ್ಲದೆ ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂದು ಯೋಚಿಸಿ ಸ್ನೇಹಿತೆಯ ಫೇಸ್‍ಬುಕ್‍ನಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರಿಗೆ ಮದುವೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾಳೆ.

ನೀವು ನಮ್ಮ ಪೋಷಕರಿಗೆ ಬುದ್ದಿಮಾತು ಹೇಳಿ. ನನ್ನ ಮದುವೆಯನ್ನು ನಿಲ್ಲಿಸುವಂತೆ ಕೋರಿದ್ದಾಳೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಭಾಸ್ಕರ್‍ರಾವ್ ಅವರು ಕುಡಲೇ ಮೈಸೂರಿನ ಜಯಪುರ ಪೊಲೀಸರಿಗೆ ಮಾಹಿತಿ ನೀಡಿ ಖುದ್ದು ಬಾಲಕಿ ಮನೆಗೆ ಹೋಗಿ ಪೋಷಕರಿಗೆ ತಿಳುವಳಿಕೆ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಜಯಪುರ ಠಾಣೆ ಪೊಲೀಸರು ಬಾಲಕಿ ಮನೆಗೆ ತೆರಳಿ ಪೋಷಕರ ಮನವೊಲಿಸಿ ಬಾಲ್ಯವಿವಾಹ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ