Home / ಜಿಲ್ಲೆ / Corona ಕ್ಷಯರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಧಾರವಾಡ ಯುವಕರು

Corona ಕ್ಷಯರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಧಾರವಾಡ ಯುವಕರು

Spread the love

ಧಾರವಾಡ: ಕ್ಷಯರೋಗದಿಂದ ಬಳಲುತ್ತಿದ್ದ ಆಂಧ್ರ ಪ್ರದೇಶ ಮೂಲದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಧಾರವಾಡದಲ್ಲಿ ಘಟನೆ ನಡೆದಿದ್ದು, ನಗರ ಸಾರಿಗೆ ಬಸ್ ನಿಲ್ದಾಣ(ಸಿಬಿಟಿ)ದ ಬಳಿ ನರಳುತ್ತ ಬಿದ್ದಿದ್ದ ವ್ಯಕ್ತಿಯನ್ನು ಯುವಕರಾದ ದೇವರಾಜ್, ವಿನಾಯಕ ಗೊಂಧಳಿ ಮತ್ತು ಮಂಜುನಾಥ ನೀರಲಕಟ್ಟಿಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಸ್ತೆ ಬದಿ ಈತನ್ನು ಕಂಡ ಧಾರವಾಡ ಯುವಕರು, ಸಹಾಯ ಮಾಡಿ, ಉಪಚರಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

ರಸ್ತೆ ಪಕ್ಕ ರಾತ್ರಿಯಿಡಿ ನರಳುತ್ತ ಮಲಗಿದ್ದ ಹುಸೇನಿ ಪೀರವಾಲಾ(55) ಕ್ಷಯರೋಗದಿಂದ ಬಳಲುತ್ತಿದ್ದ. ಈತ ಆಂಧ್ರ ಪ್ರದೇಶದ ಗುಂಟೂರು ನಗರದ ಕುಮಾರ ಸ್ಟ್ರೀಟ್ ನಿವಾಸಿಯಾಗಿದ್ದು, ಹೇಗೋ ಧಾರವಾಡಕ್ಕೆ ಬಂದು ಸಿಲುಕಿದ್ದ. ಲಾಕ್‍ಡೌನ್ ಕಾರಣ ಎಲ್ಲಿಯೂ ಹೋಗಲಾಗದೆ ರಸ್ತೆ ಪಕ್ಕ ಮಲಗಿದ್ದ. ಈತನನ್ನು ಗಮನಿಸಿದ ಯುವಕರು, ಆಹಾರ ನೀಡಿ, ಉಪಚರಿಸಿ ನಂತರ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ