Breaking News

ಕೊರೊನಾ ಅಂಧಕಾರದ ವಿರುದ್ಧ ಬೆಳಕಿನ ಯುದ್ಧ – ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ

Spread the love

ಬೆಂಗಳೂರು: ಮನುಕುಲದ ಹೆಮ್ಮಾರಿ, ಮಹಾಮಾರಿ, ಕೊರೊನಾ ವೈರಸ್ ಮೂಡಿಸಿರೋ ಅಂಧಕಾರ ಸಂಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಲೈಟ್ಸ್ ಆರಿಸಿ.. ದೀಪ ಹಚ್ಚಿ’ ಆಂದೋಲನ ಜನ ಭರ್ಜರಿ ಬೆಂಬಲ ಸೂಚಿಸಿದ್ದಾರೆ.

ದೇಶಾದ್ಯಂತ ದೀಪಾವಳಿಯಂತೆ ಜನ ದೀಪ ಹಚ್ಚುತ್ತಿದ್ದಾರೆ. ಮನೆಗಳ ಲೈಟ್ಸ್ ಆಫ್ ಮಾಡಿ, ದೇವರ ಮನೆ, ಮನೆ ಒಳಗೆ, ಮನೆ ಆವರಣ, ತುಳಸಿ ಗಿಡ, ಬಾಲ್ಕನಿ, ಟೆರೆಸ್‍ಗಳಲ್ಲಿ ದೀಪ, ಮೇಣದ ಬತ್ತಿ, ಮೊಬೈಲ್ ಫ್ಲ್ಯಾಶ್ ಹಾಗೂ ಟಾರ್ಚ್‍ಗಳ ಮೂಲಕ ಬೆಳಕು ಮೂಡಿಸಿದ್ದಾರೆ.

ಲೈಟ್ ಸ್ವಿಚ್ ಆಫ್ ಮಾಡಿದ್ರೆ ವೋಲ್ಟೇಜ್ ಏರಿಳಿತವಾಗಿ ಪವರ್ ಗ್ರಿಡ್ ಬ್ಲಾಸ್ಟ್ ಆಗುತ್ತೆ ಅನ್ನೋ ವದಂತಿಯನ್ನೆಲ್ಲಾ ತಳ್ಳಿಹಾಕಿ, ಜನ ಸ್ವಯಂ ಪ್ರೇರಿತರಾಗಿ ದೀಪಾಂದೋಲನಕ್ಕೆ ಕೈ ಜೋಡಿಸಿದರು

ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳು ಮಾತ್ರ ಹಳ್ಳಿಗಳಲ್ಲೂ ಜನ ದೀಪ ಹಚ್ತಿದ್ದಾರೆ. ಅಂದಹಾಗೆ, ಈ ದೀಪಾಂದೋಲನಕ್ಕೆ ಸಾರ್ಕ್ ರಾಷ್ಟ್ರಗಳು ಕೂಡ ಪ್ರಧಾನಿ ಮೋದಿಗೆ ಬೆಂಬಲ ನೀಡಿತ್ತು.


Spread the love

About Laxminews 24x7

Check Also

ಸೈಫ್​ ಅಲಿ ಖಾನ್ ಮೇಲಿನ ದಾಳಿ ಆಘಾತ ತಂದಿದೆ: ನಟಿ ಶಿಲ್ಪಾ ಶೆಟ್ಟಿ

Spread the loveರಾಯಚೂರು: ಬಾಲಿವುಡ್ ನಟ ಸೈಫ್​ ಅಲಿ ಖಾನ್ ಮೇಲೆ ನಡೆದಿರುವ ದಾಳಿ ಆಘಾತ ಮೂಡಿಸಿದೆ ಎಂದು ಬಾಲಿವುಡ್‌ ನಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ