Breaking News

ಬಬಲೇಶ್ವರ ಕ್ಷೇತ್ರದಲ್ಲಿ ಎಂಎಚ್ ತೇರಾ-ಬಾರಾ ವಾಹನ, ಚುನಾವಣೆಗೆ ಮುನ್ನವೇ ಭರಪೂರ ಆಮಿಷ; ಪ್ರಜಾಧ್ವನಿಯಲ್ಲಿ ಸೀರೆ-ಮೊಬೈಲ್ ಪ್ರತಿಧ್ವನಿ !

Spread the love

ವಿಜಯಪುರ: ವಿಧಾನ ಸಭೆ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಸೀರೆ-ಮೊಬೈಲ್‌ಗಳ ಸದ್ದು ಪ್ರತಿಧ್ವನಿಸುತ್ತಿದೆ !

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲರ ಕ್ಷೇತ್ರ ಬಬಲೇಶ್ವರದಲ್ಲಿ ಇಂಥದ್ದೊಂದು ಪ್ರತಿಧ್ವನಿ ಕೇಳಿ ಬರುತ್ತಿದ್ದು, ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಿಂದ ನೋಂದಣಿಯಾಗಿರುವ ಎಂಎಚ್-ತೇರಾ, ಎಂಎಚ್-ಬಾರಾ ವಾಹನಗಳು ಬಬಲೇಶ್ವರದಲ್ಲಿ ಕಾರ್ಯಾಚರಿಸುತ್ತಿದ್ದು, ಸೀರೆ ಹಾಗೂ ಮೊಬೈಲ್‌ಗಳನ್ನು ಹಂಚಿ ಜನರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಆಕ್ರೋಶ ಹೊರಹಾಕಿದ್ದಾರೆ.

ಆಧುನಿಕ ಭಗೀರಥ ಎಂದೆಲ್ಲಾ ದೊಡ್ಡ ಹೆಸರು ಪಡೆದವರು ಸೀರೆ ಹಂಚುವಂಥ ಸಣ್ಣತನ ಪ್ರದರ್ಶಿಸುತ್ತಿದ್ದಾರೆ. ಇದು ಸೋಲಿನ ಭಯ ಕಾಂಗ್ರೆಸ್‌ಗೆ ಎಷ್ಟು ಕಾಡುತ್ತಿದೆ ಎಂಬುದು ತೋರಿಸುತ್ತದೆ. ಅಧಿಕಾರ ದುರುಪಯೋಗ ಮತ್ತು ವಾಮ ಮಾರ್ಗದಿಂದಲೇ 2013 ಹಾಗೂ 2018 ರ ಚುನಾವಣೆಯಲ್ಲಿ ನನ್ನ ಸೋಲಾಯಿತು. ಈ ಬಾರಿ ಮತ್ತದೇ ಪುನರಾವರ್ತನೆಯಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಳೆದ 4.9 ವರ್ಷ ಬಬಲೇಶ್ವರ ಕ್ಷೇತ್ರದತ್ತ ಸುಳಿಯದವರು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಆಸೆ-ಆಮಿಷ ತೋರಿಸಲು ಬರುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ಜನ ಸಾವು-ನೋವಿನ ನಡುವೆ ಹೋರಾಡುತ್ತಿರುವಾಗ ಬರದವರು ಇದೀಗ ಸೀರೆ, ಮೊಬೈಲ್ ಹಾಗೂ ಹಿಟ್ಟಿನ ಗಿರಣಿ ಹಿಡಿದುಕೊಂಡು ಬರುತ್ತಿದ್ದಾರೆ. ಇದಕ್ಕೂ ಮುಂಚೆ 21991 ಹಿಟ್ಟಿನ ಗಿರಣಿಗಳನ್ನು ಅಣ್ಣ-ತಮ್ಮರ ಫೋಟೊ ಸಮೇತ ಹಂಚಲಾಯಿತು. ರಿಯಾಯಿತಿ ದರ ಎಂದು ಹೇಳಿ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆದು ಜನರನ್ನು ಮೋಸ ಮಾಡಿದರು. ಇದೀಗ ಸೀರೆ ಮತ್ತು ಮೊಬೈಲ್ ಹಂಚಲಾಗುತ್ತಿದೆ. ನಿಜಕ್ಕೂ ಬಬಲೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿ ಯಾಗಿದ್ದರೆ ಇಂದು ಈ ಸೀರೆ-ಮೊಬೈಲ್ ಹಂಚುವ ಪ್ರಮೇಯ ಬರುತ್ತಿರಲಿಲ್ಲ ಎಂದರು.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ