Breaking News

ಗಡಿಯಲ್ಲಿ ಚೆಕ್​ಪೋಸ್ಟ್ ಸಿಬ್ಬಂದಿ ಆರ್​ಟಿಪಿಸಿಆರ್ ವರದಿ ಕೇಳುತ್ತಾರೆ, ವರದಿ ಇಲ್ಲದಿದ್ದರೆ ಲಂಚ ನೀಡಬೇಕಾಗುತ್ತದೆ.?

Spread the love

ಬೆಳಗಾವಿ :ರಾಜ್ಯದಲ್ಲಿ ಕರೊನಾ ಪ್ರಕರಣ ತಗ್ಗುತ್ತಿರುವ ಕಾರಣಕ್ಕೆ ರಾತ್ರಿ ಕರ್ಫ್ಯೂ ಸೇರಿ ಅನೇಕ ನಿರ್ಬಂಧಗಳನ್ನು ಸಡಿಲಿಸಿರುವ ರಾಜ್ಯ ಸರ್ಕಾರ, ಗಡಿ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರ ಜೀವನವನ್ನು ಮಾತ್ರ ನರಕವನ್ನಾಗಿಸಿದೆ.

ಯಾವುದೇ ರ್ತಾಕ ಆಧಾರವಿಲ್ಲದೆ ಅವೈಜ್ಞಾನಿಕವಾಗಿ ವಿಧಿಸಿರುವ ನಿರ್ಬಂಧಗಳಿಂದ ಆರ್​ಟಿಪಿಸಿಆರ್ ಕಡ್ಡಾಯ ಪ್ರಮಾಣ ಪತ್ರವನ್ನೇ ನೆಪವಾಗಿಸಿಕೊಂಡು ವಾಹನ ಸವಾರರಿಂದ ರಾಜಾರೋಷವಾಗಿ ಹಣ ಸುಲಿಗೆ ಮಾಡಲಾಗುತ್ತಿದೆ. ಚೆಕ್​ಪೋಸ್ಟ್ ಸಿಬ್ಬಂದಿಗೆ ಲಂಚ ನೀಡುವುದರಿಂದ ತಪ್ಪಿಸಿಕೊಳ್ಳಲು ಅನೇಕರು ನಕಲಿ ಆರ್​ಟಿಪಿಸಿಆರ್ ವರದಿಗಳ ಮೊರೆ ಹೋಗಿದ್ದಾರೆ. ಇದರಿಂದ ಕರೊನಾ ನಿರ್ಬಂಧ ಮತ್ತಷ್ಟು ಗೊಂದಲ, ಭ್ರಷ್ಟಾಚಾರ, ಕಿರಿಕಿರಿಗೆ ಎಡೆಮಾಡಿಕೊಟ್ಟಿದೆ.

ವಿಶ್ವಾದ್ಯಂತ ಮಾನ್ಯತೆ ಪಡೆದಿರುವ ಕೋವಿಡ್ ಲಸಿಕೆಗೂ ಮಾನ್ಯತೆ ನೀಡದ ಈ ನಿರ್ಬಂಧಗಳಿಂದ ಅನೇಕ ವಿದ್ಯಾರ್ಥಿಗಳು, ಪ್ರವಾಸಿಗರು, ವ್ಯಾಪಾರಿಗಳು, ಕೂಲಿಕಾರ್ವಿುಕರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ವಿಚಾರ ಗಡಿ ಪ್ರದೇಶಗಳಲ್ಲಿ ಭಾನುವಾರ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಿಂದ ಬಯಲಾಗಿದೆ. 2022ರ ಜನವರಿ ಮೊದಲ ವಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಗಳ ಅನ್ವಯ, ಮಹಾರಾಷ್ಟ್ರ, ಕೇರಳ ಗೋವಾದಿಂದ ಆಗಮಿಸುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ಆರ್​ಟಿಪಿಸಿಆರ್ ಪ್ರಮಾಣಪತ್ರ ಹೊಂದಬೇಕು.

ಈ ಆದೇಶ ಹೊರಬಿದ್ದ ದಿನದಿಂದಲೇ ಗಡಿಯಲ್ಲಿ ಗೊಂದಲ ಹಾಗೂ ಭ್ರಷ್ಟಾಚಾರ ಆರಂಭವಾಗಿದೆ. ಆರ್​ಟಿಟಿಪಿಸಿಆರ್ ವರದಿ ಹೊಂದಿರಬೇಕೆಂಬ ಅವೈಜ್ಞಾನಿಕ ನಿಯಮದಿಂದಾಗಿ ಚೆಕ್​ಪೋಸ್ಟ್​ಗಳಲ್ಲಿ ನಿತ್ಯ ಪ್ರಯಾಣಿಕರು ಹಾಗೂ ಪೊಲೀಸರ ವಾಗ್ವಾದ ಸಾಮಾನ್ಯವಾಗಿದೆ.

ನಕಲಿ ದಂಧೆ: ಗಡಿಯಲ್ಲಿ ಚೆಕ್​ಪೋಸ್ಟ್ ಸಿಬ್ಬಂದಿ ಆರ್​ಟಿಪಿಸಿಆರ್ ವರದಿ ಕೇಳುತ್ತಾರೆ, ವರದಿ ಇಲ್ಲದಿದ್ದರೆ ಲಂಚ ನೀಡಬೇಕಾಗುತ್ತದೆ. ಹೀಗಾಗಿ ಅನೇಕರು ನಕಲಿ ಆರ್​ಟಿಪಿಸಿಆರ್ ವರದಿ ಮೊರೆ ಹೋಗುತ್ತಿರುವ ಪ್ರಕರಣ ಮಹಾರಾಷ್ಟ್ರದ ಕೊಗನೊಳ್ಳಿ, ಕೇರಳ ಗಡಿಯಲ್ಲಿರುವ ಮೂಲೆಹೊಳೆ ಚೆಕ್​ಪೋಸ್ಟ್​ಗಳಲ್ಲಿ ಕಂಡುಬಂದಿದೆ. ಗಡಿಯಲ್ಲಿ ಪ್ರಯಾಣಿಕ ವಾಹನಗಳು ಹೆಚ್ಚಾಗಿ ರಾತ್ರಿ ವೇಳೆ ಹಾಗೂ ಬೆಳಗಿನ ಜಾವ ಸಂಚರಿಸುತ್ತವೆ


Spread the love

About Laxminews 24x7

Check Also

ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ

Spread the love ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ ಬಸವಣ್ಣನ ಹೆಸರಲ್ಲಿ ಕೆಲವರಿಂದ ಸಮಾಜ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ