ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಆಸ್ಕರ್ ಪರ್ನಾಂಡಿಸ್ ಅವರ ನಿಧನದ ಸಂತಾಪ ಸೂಚಕದ ಮೇಲಿನ ಚರ್ಚೆ ವೇಳೆ ಆರ್.ವ್ಹಿ.ದೇಶಪಾಂಡೆ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಚಾಯಿಸಿದ್ದರೆ.
‘ನಿನ್ಗೆ ಅನೇಕ ಕನ್ನಡದ ಪದಗಳು ಗೊತ್ತಾಗಲ್ಲ ದೇಶಪಾಂಡೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಫರ್ನಾಂಡಿಸ್ ಅವರು ಕೇಂದ್ರದಲ್ಲಿ ಸರ್ಫೇಸ್ ಟ್ರಾನ್ಸ್ ಪೋರ್ಟ್ ಮಿನಿಸ್ಟರ್ ಇದ್ದರು ಎಂದು ಹೇಳಿದ್ದರು ಅದನ್ನ ನೆನಪಿಸಿಕೊಂಡ ಸಿದ್ದರಾಮಯ್ಯ, ಅದು ಕನ್ನಡದಲ್ಲಿ ಅದನ್ನು ‘ಭೂ ಸಾರಿಗೆ’ ಎಂದು ಹೇಳುತ್ತಾರೆ ಎಂದರು.
ಅಷ್ಟಕ್ಕೆ ಸುಮ್ಮನಾಗದ ಸಿದ್ದರಾಮಯ್ಯ, ನಿನ್ಗೆ ಅನೇಕ ಕನ್ನಡ ಪದಗಳು ಗೊತ್ತಾಗಲ್ಲ ಬಿಡಯ್ಯ ಎಂದು ಕಿಚಾಯಿಸಿದ್ದಾರೆ. ಅದಕ್ಕೆ ದೇಶಪಾಂಡೆ ಅವರು ನಾನು ಕೂಡ ಭೂ ಸಾರಿಗೆ ಅಂತಾನೇ ಹೇಳಿದ್ದು ಎಂದು ಪುನರುಚ್ಚರಿಸಿದ್ದಾರೆ.
ತುಂಬಾ ವಿಶೇಷ ಹಾಗೂ ನಿಖರತೆ ಹೊಂದಿರುವ ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ…