Breaking News
Home / Uncategorized / ಡಿಸಿಎಂ ಹೋದ 10 ನಿಮಿಷದ ನಂತರ ಧರೆಗುರುಳಿದ ಮರ: ಅಪಾಯದಿಂದ ಪಾರು

ಡಿಸಿಎಂ ಹೋದ 10 ನಿಮಿಷದ ನಂತರ ಧರೆಗುರುಳಿದ ಮರ: ಅಪಾಯದಿಂದ ಪಾರು

Spread the love

ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ವರ್ಷಧಾರೆ ಸುರಿಯಿತು. ನಗರದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಸುರಿದ ಮಳೆಗೆ ಹಲವೆಡೆ ರಸ್ತೆಗಳು ಕೆರೆ, ಕಾಲುವೆಗಳಂತೆ ತುಂಬಿಕೊಂಡಿದ್ದವು.

ಇದೇ ವೇಳೆ ಜೆಎಲ್‌ಬಿ ರಸ್ತೆಯಲ್ಲಿ ಎಸ್‌ಡಿಎಂ ಕಾಲೇಜು ಮುಂಭಾಗದ ರಸ್ತೆಯಲ್ಲೇ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಬರುವ ಐದತ್ತು ನಿಮಿಷಗಳ ಅಂತರದಲ್ಲೇ ಮರವೊಂದು ಧರೆಗುರುಳಿದೆ. ಸಕಾಲಕ್ಕೆ ಆಗಮಿಸಿದ ಅಭಯ-೧ ತಂಡದ ಮಂಜುನಾಥ್ ಡಿ, ಪ್ರಭು,ಮಹದೇವ್,ಸುರೇಂದ್ರ, ಮನು, ವಿಕ್ರಂ ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.’


Spread the love

About Laxminews 24x7

Check Also

2ನೇ ಹಂತದ ಲೋಕಸಭೆ ಚುನಾವಣೆ; ಕೊಪ್ಪಳದಲ್ಲಿ ಮತದಾನ ಬಹಿಷ್ಕಾರ

Spread the loveಕೊಪ್ಪಳ: ಲೋಕಸಭೆ ಚುನಾವಣೆಗೆ ರಾಜ್ಯದ ಎರಡನೇ ಹಂತದ ಮತದಾನ ಇಂದು (ಮೇ 7) ಆರಂಭವಾಗಿದೆ. ಉತ್ತರ ಕರ್ನಾಟಕದ 14 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ