Breaking News

ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಬದಲಾಯಿಸಲು ಸಿದ್ಧ: ಆದರೆ ಸಿಬ್ಬಂದಿ ಎಲ್ಲಿದೆ? ಹೋಟೆಲ್ ಮಾಲೀಕರ ಪ್ರಶ್ನೆ

Spread the love

ಬೆಂಗಳೂರು: ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನು ಮಾರ್ಪಡಿಸಲು ತಾವು ಸಿದ್ದರಿದ್ದೇವೆ. ಅದರೆ ಅಲ್ಲಿಗೆ ಬೇಕಾದ ಸೌಲಭ್ಯ ಹಾಗೂ ಸಿಬ್ಬಂದಿಗೆ ಏನು ವ್ಯವಸ್ಥೆ ಮಾಡುವಿರಿ ಎಂದು ಹೋಟೆಲ್ ಮಾಲೀಕರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಹೋಟೆಲ್ ಅಸೋಷಿಯೇಷನ್, ಜೊತೆ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಅಧಿಕಾರಿಗಳು ನಡೆಸಿದ ವರ್ಚ್ಯೂವಲ್ ಸಭೆಯಲ್ಲಿ ಈ ಪ್ರಶ್ನೆ ಎತ್ತಲಾಯಿತು.

10 ಹೋಟೆಲ್ ಗಳ 1000 ರೂಂ ಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾಯಿಸುತ್ತೇವೆ, ಸರ್ಕಾರ 2000 ರೂಂ ಕೇಳಿದೆ. ಆದರೆ ಹೋಟೆಲ್ ಅಸೋಸಿಯೇಷನ್ 1,200 ರೂ ನೀಡಲು ನಿರ್ಧರಿಸಿದೆ.

ಬ್ಯುಸಿನೆಸ್ ಇಲ್ಲದ ಕಾರಣ ರೂಂ ಗಳು ಸಿದ್ದವಿದೆ., ಆದರೆ ಹೋಟೆಲ್ ರೂಂ ಗಳನ್ನು ಕೋವಿಡ್ ಕೇರ್ ಗಳನ್ನಾಗಿ ಮಾಡಲು ಸರ್ಕಾರದ ಬಳಿ ಅಗತ್ಯವಾದ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಆಕ್ಸಿಜನ್ ಮತ್ತು ವೆಂಟಿಲೇಟರ್ ಗಳು ಇದೆಯೇ ಎಂದು ಹೋಟೆಲ್ ಮಾಲೀಕರ ಸಂಘದ ಸದಸ್ಯರೊಬ್ಬರು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ನಮ್ಮ ವ್ಯವಹಾರವು ತುಂಬಾ ಕುಸಿದಿದೆ. ಹೋಟೆಲ್ ಸಿಸಿಸಿ ಆಗಿದ್ದರೆ, ಕ್ಯಾಟಗರಿ ಅವಲಂಬಿಸಿ, ಆಸ್ಪತ್ರೆಯು ಪ್ರತಿ ಹಾಸಿಗೆ 1,500- 2,200 ರೂ. ಹಣವನ್ನು ಕೊಠಡಿ ಬಾಡಿಗೆ ಮತ್ತು ಆಹಾರಕ್ಕಾಗಿ ಪಾವತಿಸಲಾಗುತ್ತದೆ. ತುಂಬಾ ಪ್ರಸಿದ್ದವಾದ ಆಸ್ಪತ್ರೆಯಾದರೇ ದರಗಳು ಮತ್ತಷ್ಟು ಹೆಚ್ಚಿರುತ್ತದೆ.

ಆದ್ದರಿಂದ ಇದು ಲಾಭದಾಯಕವಲ್ಲದಿದ್ದರೂ ಸಹ, ಹಣವು ಹೋಟೆಲ್ ಸಿಬ್ಬಂದಿಗಳ ವೇತನವನ್ನು ಪೂರೈಸಲು ಸಹಾಯ ಮಾಡುತ್ತದೆ, ಆದ್ದರಿಂದ, ಹೋಟೆಲ್‌ಗಳು ಕೊಠಡಿಗಳನ್ನು ನೀಡಲು ಉತ್ಸುಕವಾಗಿವೆ, ಆದರೆ ಮೂಲಸೌಕರ್ಯಗಳ ಅಗತ್ಯವಿರುವುದರಿಂದ ಸಮಯ ತೆಗೆದುಕೊಳ್ಳುತ್ತಿವೆ.

ಸಭೆಯಲ್ಲಿ, ಬಿಬಿಎಂಪಿ ವಲಯಗಳಲ್ಲಿ ಕೊಠಡಿಗಳೊಂದಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಮತ್ತು ಹಂತ ಹಂತವಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಬೊಮ್ಮಾಯಿ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಕೆಪಿಎಂಇ ಕಾಯ್ದೆಯಡಿ ನೋಂದಾಯಿಸಲಾದ ಆಸ್ಪತ್ರೆಗಳು ತಮ್ಮ ನೆರೆಹೊರೆಯ ಹೋಟೆಲ್‌ಗಳೊಂದಿಗೆ ಹೊಂದಾಣಿಕೆ
ಮಾಡಿಕೊಳ್ಳಬಹುದು ಮತ್ತು ತಕ್ಷಣ ಆರೋಗ್ಯ ಸೌಲಭ್ಯವನ್ನು ಪ್ರಾರಂಭಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಈ ಸೌಲಭ್ಯಗಳಿಗಾಗಿ ವೈದ್ಯರು ಮತ್ತು ದಾದಿಯರನ್ನು ಒದಗಿಸುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು. ಈ ಕೇಂದ್ರಗಳಲ್ಲಿ ನಿವೃತ್ತ ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಸಹ ಬಳಸಿಕೊಳ್ಳಲಾಗುವುದು. ಈಗಾಗಲೇ 13 ಆಸ್ಪತ್ರೆಗಳ ಸಹಾಯದಿಂದ ಸುಮಾರು 1,200 ಹೋಟೆಲ್ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಪಿ ಸಿ ರಾವ್ ಹೇಳಿದ್ದಾರೆ.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ