Breaking News

ಇಂಡಿಯಾ’ ಒಕ್ಕೂಟಕ್ಕೆ ಕಾಂಗ್ರೆಸ್‌ ಶಾಸಕರಿಂದಲೇ ಮೋಸ! MLC ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

Spread the love

ಮುಂಬೈ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ , ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ (NDA Alliance) ಮಹಾರಾಷ್ಟ್ರದಲ್ಲಿ ಭಾರಿ ಹಿನ್ನಡೆ ಉಂಟಾಗಿತ್ತು. ಅದೇ ಸಮಯದಲ್ಲಿ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಭರ್ಜರಿ ಸಾಧನೆ ಮಾಡಿತ್ತು.'ಇಂಡಿಯಾ' ಒಕ್ಕೂಟಕ್ಕೆ ಕಾಂಗ್ರೆಸ್‌ ಶಾಸಕರಿಂದಲೇ ಮೋಸ! MLC ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

ಆದರೆ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಆಟ ಫುಲ್ ತಲೆಕೆಳಗಾಗಿದೆ.

ಹೌದು.. ಮಹಾರಾಷ್ಟ್ರದಲ್ಲಿ ನಿನ್ನೆ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ 9 ಅಭ್ಯರ್ಥಿಗಳೂ ಗೆದ್ದಿದ್ದಾರೆ. ಇದರ ಪರಿಣಾಮ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಕಾಣಿಸಲಿದೆ ಎಂದು ಹೇಳಲಾಗ್ತಿದೆ.

ಎಂಎಲ್‌ಸಿ ಚುನಾವಣೆಯಲ್ಲಿ 11 ಸ್ಥಾನಗಳಿಗೆ ಒಟ್ಟು 12 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಈ ಪೈಕಿ 9 ಮಂದಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಕೂಟ ಮತ್ತು 3 ಮಂದಿ ವಿಪಕ್ಷಗಳ ಮಹಾವಿಕಾಸ್ ಅಘಾಡಿಯಿಂದ ಕಣಕ್ಕಿಳಿದಿದ್ದರು. ಮಹಾಯುತಿಯ 9 ಅಭ್ಯರ್ಥಿಗಳಲ್ಲಿ 9 ಅಭ್ಯರ್ಥಿಗಳು ಗೆದ್ದರೆ, ಎಂವಿಎಯ 2 ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಚುನಾವಣೆಯಲ್ಲಿ, MVA 66 ಮತಗಳನ್ನು ಹೊಂದಿತ್ತು, ಅದು ಅಡ್ಡ ಮತದಾನ ನಡೆಯಬಹುದು ಆ ಮೂಲಕ ತನ್ನ ಎಲ್ಲಾ ಮೂರು ಅಭ್ಯರ್ಥಿಗಳು ಗೆಲ್ಲಬಹುದು ಎಂಬ ಆಶಾವಾದದಲ್ಲಿತ್ತು. ಆದರೆ ಅದು ಆಗಲಿಲ್ಲ.

MLC ಸೀಟುಗಳು ಪೂರ್ಣ ಸಂಖ್ಯೆಯ ಆಟ!

ಪ್ರಸ್ತುತ ಮಹಾರಾಷ್ಟ್ರ ವಿಧಾನಸಭೆಯ ಸ್ಥಾನ 274 ಆಗಿದೆ. ಈ ಅರ್ಥದಲ್ಲಿ ಒಂದು ಸ್ಥಾನ ಗೆಲ್ಲಲು ಕನಿಷ್ಠ 23 ಶಾಸಕರ ಬೆಂಬಲ ಬೇಕಿತ್ತು. ಬಿಜೆಪಿ 103 ಶಾಸಕರನ್ನು ಹೊಂದಿದೆ, ಅಜಿತ್ ಪವಾರ್ ಅವರ ಎನ್‌ಸಿಪಿ 40 ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ 38 ಶಾಸಕರನ್ನು ಹೊಂದಿದೆ. ಇದಲ್ಲದೆ ಮಹಾಯುತಿಯ ಇತರ ಮಿತ್ರಪಕ್ಷಗಳು ಮತ್ತು ಸ್ವತಂತ್ರ ಶಾಸಕರ ಸಂಖ್ಯೆ ಸೇರಿದಂತೆ 203 ಶಾಸಕರ ಬೆಂಬಲವನ್ನು ಎನ್‌ಡಿಎ ಹೊಂದಿತ್ತು.

ಹೀಗಿರುವಾಗ ಆಡಳಿತ ಪಕ್ಷ ಶಾಸಕರನ್ನು ತನ್ನ ಪಾಳೆಯದಲ್ಲಿ ಇಟ್ಟುಕೊಂಡು ಹೇಗಾದರೂ ಮಾಡಿ ನಾಲ್ವರು ಶಾಸಕರ ಬೆಂಬಲ ಸಂಗ್ರಹಿಸಿದರೆ 9 ಸ್ಥಾನ ಗೆಲ್ಲಬಹುದು ಎಂಬುದು ಸ್ಪಷ್ಟವಾಯಿತು. ಫಲಿತಾಂಶ ಬಂದ ನಂತರವೂ ಅದೇ ಆಯಿತು. ಚುನಾವಣೆಗೂ ಮುನ್ನ ಯಾವ ಪಕ್ಷದ ಶಾಸಕರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಯಾವ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಬಹುದು ಎಂಬ ಕುತೂಹಲವಿತ್ತು. ಏಕೆಂದರೆ ಶರದ್ ಪವಾರ್ ಅವರ ಎನ್‌ಸಿಪಿಯಿಂದ ಮುರಿದುಬಿದ್ದ ನಂತರ ಅಜಿತ್ ಪವಾರ್ ಅವರ ಬಣ ರಚನೆಯಾಯಿತು ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ ಮುರಿದಾಗ ಏಕನಾಥ್ ಶಿಂಧೆ ತಮ್ಮದೇ ಆದ ಸೈನ್ಯವನ್ನು ರಚಿಸಿದರು. ಇಂತಹ ಪರಿಸ್ಥಿತಿಯಲ್ಲಿ ಈ ಆಟ ಕುತೂಹಲ ಮೂಡಿಸಿತ್ತು.


Spread the love

About Laxminews 24x7

Check Also

ಬಸ್ಸಿನ ಕಿಟಕಿ ಸೀಟಿಗಾಗಿ ಕಿತ್ತಾಟ…

Spread the love ಬೆಳಗಾವಿ: ಬಸ್ಸಿನ ಕಿಟಕಿ ಸೀಟಿಗಾಗಿ ಕಿತ್ತಾಟ… ಕಾಲೇಜು ವಿದ್ಯಾರ್ಥಿಗೆ ಹರಿತವಾದ ಆಯುಧದಿಂದ ಇರಿದು ಪರಾರಿಯಾದ ಅಪರಿಚಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ