Breaking News
Home / 2021 / ಮೇ / 13 (page 4)

Daily Archives: ಮೇ 13, 2021

ಇಸ್ರೇಲ್ ದಾಳಿಗೆ 10 ಹಮಾಸ್ ಬಂಡುಕೋರ ನಾಯಕರ ಸಾವು

ಗಾಜಾ: ಇಸ್ರೇಲ್ ಹಾಗೂ ಪಾಲೆಸ್ಟೈನ್ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಜಾ ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ 10ರಷ್ಟು ಬಂಡುಕೋರ ನಾಯಕರನ್ನು ಹೊಡೆದುರುಳಿಸಲಾಗಿದ್ದು, ಎರಡು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಪಾಲೆಸ್ಟೈನ್‌ನ ಹಮಾಸ್ ಬಂಡುಕೋರರು, ಇಸ್ರೇಲ್ ಮೇಲೆ 1,000ಕ್ಕೂ ಹೆಚ್ಚು ರಾಕೆಟ್ ದಾಳಿಯನ್ನು ನಡೆಸಿದೆ. 2014ರಲ್ಲಿ ಇಸ್ರೇಲ್ ಹಾಗೂ ಪಾಲೆಸ್ಟೈನ್ ನಡುವೆ ನಡೆದ ಯುದ್ಧವು 50 ದಿನಗಳ ಕಾಲ ಮುಂದುವರಿದಿತ್ತು. ಈಗ ಹಿಂದಿನಗಿಂತಲೂ ಭೀಕರ ಪರಿಸ್ಥಿತಿ ನಿರ್ಮಾಣವಾಗುವ …

Read More »

ಲಸಿಕಾ ಅಭಾವ; ದೆಹಲಿಯಲ್ಲಿ ಮುಚ್ಚಿದ 100 ಲಸಿಕಾ ಕೇಂದ್ರಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಿಂತು ರಾಷ್ಟವ್ಯಾಪಿ ಲಸಿಕಾ ಉತ್ಸವ ನಡೆಯಬೇಕು ಎಂದು ಕರೆಕೊಟ್ಟರು. ಆದರೆ ಇದೀಗ ಅದೇ ದೆಹಲಿಯಲ್ಲಿ ಲಸಿಕೆಯ ಅಭಾವ ಉಂಟಾಗಿ 100 ಹೆಚ್ಚು ಲಸಿಕಾ ಕೇಂದ್ರಗಳು ಮುಚ್ಚಿಹೋಗಿವೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಗ್ರಿಸಲಾಗಿದ್ದ ಎಲ್ಲ ಲಸಿಕೆಗಳು ಖಾಲಿಯಾದ್ದರಿಂದ ನಗರದ 100 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ …

Read More »

ರಾಜ್ಯದಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ : ಅರೋಗ್ಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೆ ಮೊದಲ ಲಸಿಕೆ ನೀಡುವುದನ್ನು ಮೇ. 14 ರಿಂದ ತಾತ್ಕಾಲಿಕವಾಗಿ ಮುಂದೂಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ರಾಜ್ಯದ ಎಲ್ಲ ಲಸಿಕಾ ಕೇಂದ್ರಗಳು ಈ ಆದೇಶವನ್ನು ಪಾಲಿಸಲು ಅರೋಗ್ಯ ಇಲಾಖೆ ಸೂಚಿಸಿದೆ. ರಾಜ್ಯದಲ್ಲಿ ಈಗಾಗಲೇ ಲಸಿಕೆ ಪಡೆದಿರುವ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್‌ ಕೊಡಲು ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳಲಾಗಿದ್ದು, ಈಗ ರಾಜ್ಯದಲ್ಲಿ ಲಭ್ಯವಿರುವ ಲಸಿಕೆಯನ್ನು ಎರಡನೇ ಡೋಸ್‌ ನೀಡಲು ಮಾತ್ರ ಬಳಕೆ …

Read More »

1000 ಆಕ್ಸಿಜನ್​ ಬೆಡ್​ ಇರುವ, ದೇಶದಲ್ಲಿಯೇ ಅತ್ಯಂತ ದೊಡ್ಡ ಕೊವಿಡ್​ ಕಾಳಜಿ ಕೇಂದ್ರ ಕೇರಳದಲ್ಲಿ ನಿರ್ಮಾಣ

ಭಾರತದಲ್ಲಿಯೇ ಅತ್ಯಂತ ದೊಡ್ಡದಾದ, ಆಕ್ಸಿಜನ್​ ಬೆಡ್​ಗಳನ್ನೊಳಗೊಂಡ ಕೊವಿಡ್​ 19 ಕಾಳಜಿ ಕೇಂದ್ರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ. ಇದು ಎರ್ನಾಕುಲಂನ ಅಂಬಾಲಮುಗಲ್​ನಲ್ಲಿ ಸಿದ್ಧವಾಗುತ್ತಿರುವ ಈ ಕೊವಿಡ್​ ಕೇರ್​​ ಸೆಂಟರ್​​ನಲ್ಲಿ 1000 ಆಕ್ಸಿಜನ್ ಬೆಡ್​ಗಳು ಇರಲಿವೆ. ಗುರುವಾರ (ಮೇ 13)ದ ಹೊತ್ತಿಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ. ಎಲ್ಲೆಲ್ಲೂ ಆಕ್ಸಿಜನ್ ಕೊರತೆ ಮಿತಿಮೀರುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಅಂಬಾಲಮುಗಲ್​ನ ರಿಫೈನರಿ ಶಾಲೆ ಮೈದಾನದಲ್ಲಿ, 1000 ಆಕ್ಸಿಜನ್ ಬೆಡ್​​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎಸ್​. ಸುಹಾಸ್ …

Read More »

ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು

ಮೊಟ್ಟೆಯೊಡೆದು ಬರೋಬ್ಬರಿ 1.48ಕೋಟಿ ಆಮೆ ಮರಿಗಳು ಒಡಿಶಾದ ಗಹಿರ್ ಮಾತಾ ಕಡಲ ಸೇರಿವೆ. ಈ ಕಡಲ ತೀರದಲ್ಲಿ ಆಲಿವ್ ರಿಡ್ಲೆ ತಳಿಯ ಸುಮಾರು 1.48 ಕೋಟಿ ಆಮೆಗಳು ಕಾಣಿಸಿಕೊಂಡಿವೆ. ಮೇ 8ರಂದು ಈ ಆಮೆಗಳು ಕಂಡಿದ್ದು, ಪುಟ್ಟ ಆಮೆ ಮರಿಗಳು ತಮ್ಮ ತಾಯಿಂದಿರುವ ಇಲ್ಲದೇ ಇರುವ ವೇಳೆಯಲ್ಲಿ ಮೊಟ್ಟೆಯೊಡೆದುಕೊಂಡು ಹೊರಬಂದಿವೆ. ಪ್ರಕೃತಿಯ ಈ ವಿಸ್ಮಯದ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. “ಒಟ್ಟಾರೆಯಾಗಿ 1.48ಕೋಟಿ ಆಮೆಗಳು ಮೊಟ್ಟೆಯೊಡೆದು …

Read More »

ಕುತೂಹಲಕ್ಕೆ ಕಾರಣವಾಗಿದೆ ಆಕಾಶದಲ್ಲಿ ಕಂಡುಬಂದ ವಿಚಿತ್ರ ಆಕೃತಿ.!

ಕಳೆದ ವರ್ಷ ಜನವರಿ ತಿಂಗಳಲ್ಲಿ ಲಾಹೋರ್​​ನಲ್ಲಿ ವಿಚಿತ್ರವಾದ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ಕಾಣಿಸಿಕೊಂಡ ಘಟನೆ ನಿಮಗೆ ನೆನಪಿದ್ದಿರಬಹುದು. ಈ ದೃಶ್ಯದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕರು ಇದನ್ನ ಹಾರುವ ತಟ್ಟೆ ಇರಬಹುದು ಎಂದು ಭಾವಿಸಿದ್ದರು. ಆದರೆ ಬಳಿಕ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿ ಇದೊಂದು ಕೈಗಾರಿಕಾ ಪ್ರದೇಶದಲ್ಲಿ ಆದ ಸಮಸ್ಯೆಯಿಂದಾಗಿ ಈ ರೀತಿ …

Read More »