ಬೆಳಗಾವಿ ಹೊಲಗಳಲ್ಲಿ ಬೆಳೆಗಳನ್ನು ನಾಶ ಮಾಡಬೇಡಿ ಎಂದು ವಿನಂತಿಸಿರುವ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಬೆಳೆಗಳನ್ನು ದಾನ ಇಲ್ಲವೇ ಖರೀದಿ ಮೂಲಕ ಪಡೆದು ಹಳ್ಳಿಗಳಲ್ಲಿ ಉಚಿತವಾಗಿ ಹಂಚುತ್ತಿದ್ದಾರೆ.
ಯಮಕನಮರಡಿ ಕ್ಷೇತ್ರದಲ್ಲಿ ಅನೇಕ ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿದ್ದಾರಿ. ಇದನ್ನು ಗಮನಿಸಿದ ಜಾರಕಿಹೊಳಿ, ಬೆಳೆಗಳನ್ನು ಅನಗತ್ಯವಾಗಿ ವ್ಯರ್ಥ ಮಾಡಬೇಡಿ ಎಂದು ವಿನಂತಿಸಿದ್ದಾರೆ.
ಹೊಲಕ್ಕೆ ತಮ್ಮ ಕಾರ್ಯಕರ್ತರನ್ನು ಕಳುಹಿಸಿ, ಯಾರು ದಾನವಾಗಿ ನೀಡುತ್ತಾರೋ ಅದನ್ನು ಪಡೆದು, ಇಲ್ಲವಾದಲ್ಲಿ ಖರೀದಿಸಿ ತರುವಂತೆ ಸೂಚಿಸಿರುವ ಜಾರಕಿಹೊಳಿ, ಅವುಗಳನ್ನು ವಾಹನದ ಮೂಲಕ ಸಾಗಿಸಿ ಹಳ್ಳಿಗಳಲ್ಲಿ ಉಚಿತವಾಗಿ ಹಂಚುತ್ತಿದ್ದಾರೆ.