ಕಟಕೋಳ: ಇಲ್ಲಿನ ಪೊಲೀಸರು ಕಾರ್ಯಾಚರಣೆ ನೆಡೆಸಿ ಎಂಟು ಜನ ಕಳ್ಳರನ್ನು ಬಂಧಿಸಿ 4.94 ಲಕ್ಷ ರೂ. ಮೌಲ್ಯದ ಮೊಬೈಲ್ ಹಾಗೂ 5.40 ಲಕ್ಷ ರೂ.ಮೌಲ್ಯದ ಎರಡು ಕಾರು ವಶಪಡಿಸಿಕೊಂಡಿದ್ದಾರೆ.
ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳ ಹಾಗೂ ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಸ್ಥಳೀಯ ಪಿಎಸ್ಐ ಬಸವರಾಜ ಕೊಣ್ಣೂರೆ, ಎಎಸ್ಐ ಎಲ್.ಅನ್ನಪೂರ್ಣಾ, ಸಿಬ್ಬಂದಿ ಎಸ್.ಎಂ.ಡೊನವಾಡ, ಎಸ್.ಎಂ.ಬಸರಿಕಟ್ಟಿ, ಆರ್.ಬಿ.ಗೊಕಾಕ, ಎಸ್.ಎಸ್.ವಜ್ರಮಟ್ಟಿ, ಎಂ.ಎಂ.ದ್ಯಾಮನಗೌಡರ, ಡಿ.ಎಚ್.ನದ್ಾ, ಮಂಜುನಾಥ ಹಿರೂರ, ಬಿ.ವಿ.ಹುಲಕುಂದ, ಐ.ಬಿ.ಕಡಕೋಳ, ಬಿ.ಎಸ್.ಚುಂಚನೂರ ತನಿಖೆ ಕೈಗೊಂಡಿದ್ದರು.
ಆರೋಪಿಗಳಾದ ವಿಕಾಸ ಭೋವಿ, ಕುಮಾರ ಭೋವಿ, ಪ್ರವೀಣ ಭೋವಿ, ಸಂತೋಷ ಗವಿಸ್ವಾಮಿ, ಶಿವು ಭೋವಿ, ವೆಂಕಟೇಶ ಭೋವಿ, ಅಕ್ಷಯ ಗಣೇಶ, ಹಾಗೂ ಸಚಿನ ಕಲ್ಲವಡ್ಡರ ಸೇರಿದಂತೆ ಎಂಟು ಜನರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Laxmi News 24×7