ಮುಂಬೈ: ಮೊಹರಂ ಅಂದ್ರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ಈ ತಿಂಗಳನ್ನ ಇಸ್ಲಾಂನಲ್ಲಿ ಹೊಸ ವರ್ಷ ಅಂತಾ ಆಚರಣೆ ಮಾಡಲಾಗುತ್ತದೆ. ಅದಕ್ಕಾಗಿ ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪುಣ್ಯದ ಕೆಲಸಗಳನ್ನ ಕೈಗೊಳ್ಳುತ್ತಾರೆ. ಆದ್ರೆ ಈ ಸಂರ್ಭದಲ್ಲಿ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮುಂಬೈ: ಮುಂಬೈ ನಗರದಲ್ಲಿ ಮುಹರಂ ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿಷ ಉಣಿಸಲು ಹೂಡಲಾಗಿದ್ದ ಆಘಾತಕಾರಿ ಸಂಚನ್ನು ಮುಂಬೈ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಭಾರಿ ಪ್ರಮಾಣದಲ್ಲಿ ಅಂದರೆ ಒಟ್ಟು 14,900 ವಿಷಪೂರಿತ ಕ್ಯಾಪ್ಸೂಲ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪುಣೆ ಮೂಲದ ಉದ್ಯಮಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.ಜಿಂಕ್ ಫಾಸ್ಫೈಡ್ ತುಂಬಿದ್ದ ಕ್ಯಾಪ್ಸೂಲ್ಗಳು
ವಿಶ್ವಾಸಾರ್ಹ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮುಹರಂ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಸಾಗಿಸಲಾಗುತ್ತಿದ್ದ 14,900 ಕ್ಯಾಪ್ಸೂಲ್ಗಳನ್ನು ಜಪ್ತಿ ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಕ್ಯಾಪ್ಸೂಲ್ಗಳಲ್ಲಿ ತೀವ್ರ ವಿಷಕಾರಿಯಾದ ‘ಜಿಂಕ್ ಫಾಸ್ಫೈಡ್’ (ಇಲಿ ಪಾಷಾಣ ಅಥವಾ ಇಲಿ ವಿಷ) ಅನ್ನು ತುಂಬಿಸಲಾಗಿತ್ತು ಎಂದು ತಿಳಿದುಬಂದಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಜನರಿಗೆ ಇದನ್ನು ತಲುಪಿಸುವ ದುರುದ್ದೇಶವನ್ನು ಹೊಂದಲಾಗಿತ್ತು ಎನ್ನಲಾಗಿದೆ.
ಪುಣೆ ಉದ್ಯಮಿಯ ಬಂಧನ ಮತ್ತು ಆಳವಾದ ತನಿಖೆ
ಈ ಜಾಲದ ಬೆನ್ನತ್ತಿದ ಮುಂಬೈ ಪೊಲೀಸರು ಪುಣೆಯ ಉದ್ಯಮಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ತನಿಖಾಧಿಕಾರಿಗಳು ಈತನ ಇತ್ತೀಚಿನ ಪ್ರವಾಸದ ವಿವರಗಳು, ಆರ್ಥಿಕ ವಹಿವಾಟುಗಳು ಹಾಗೂ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ. ಈ ಕೃತ್ಯದ ಹಿಂದೆ ಯಾವುದಾದರೂ ದೊಡ್ಡ ಸಂಘಟನೆ ಅಥವಾ ಇತರ ವಿದ್ವಂಸಕ ಶಕ್ತಿಗಳ ಕೈವಾಡವಿದೆಯೇ ಎಂಬ ಕೋನದಲ್ಲೂ ಪೊಲೀಸರು ಆಳವಾದ ಶೋಧ ನಡೆಸುತ್ತಿದ್ದಾರೆ.
Laxmi News 24×7