ಬೆಂಗಳೂರು: ಲಾಕ್ಡೌನ್ ಆದೇಶ ಉಲ್ಲಂಘಿಸುವ ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್ ಮಾಡದಂತೆ ಕಮಿಷನರ್ ಭಾಸ್ಕರ್ ರಾವ್, ನಗರ ಪೊಲೀಸರಿಗೆ ಖಡಕ್ ಆದೇಶ ನೀಡಿದ್ದಾರೆ.
ಪೊಲೀಸರು ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕು. ವೃದ್ದರು, ಮಹಿಳೆಯರಿಗೆ ಗೌರವ ನೀಡಿ. ಕಡ್ಡಾಯವಾಗಿ ಸಮವಸ್ತ್ರ ಧರಿಸಿಬೇಕು. ಅವಶ್ಯಕತೆ ಇದ್ದರೆ ಕೇವಲ ಕೆಎಸ್ಆರ್ಪಿ ಮತ್ತು ಸಿಎಆರ್ ಪೊಲೀಸರು ಮಾತ್ರ ಬಳಸಬಹುದು. ಆದ್ರೆ ಸಿವಿಲ್ ಪೊಲೀಸರು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಲಾಠಿ ಬಳಸಬೇಡಿ.
ಮೈಕ್ಗಳನ್ನ ಬಳಸಿ ಅನೌನ್ಸ್ಮೆಂಟ್ ಮಾಡುವ ಮೂಲಕ ಜನರ ಮನವೊಲಿಸಿ ಅಂತಾ ಹೇಳಿದ್ದಾರೆ.
ಗೃಹಸಚಿವ ಬಸವರಾಜ ಬೊಮ್ಮಾಯಿ ಕೂಡಾ ಲಾಠಿ ಬಳಸದಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ.