ಬೆಳಗಾವಿ: ಪಿಕ್ನಿಕ್ ಮಾಡಲು ಹೋಗಿದ್ದ ಖಾನಾಪುರದ ಇಬ್ಬರು ಯುವಕರು ನೀರುಪಾಲಾದ ಘಟನೆ ಖಾನಾಪುರದ ಅಸೋಗಾ ಬಳಿ ಇರುವ ಹಾಲತ್ರಿ ಹಳ್ಳದ ಮಲಪ್ರಭಾ ನದಿಯ ಉಗಮ ಸ್ಥಾನದಲ್ಲಿ ನಡೆದಿದೆ.
ಮೃತ ಯುವಕರನ್ನು ಉಮರ್ ಖಲೀಫ್(16), ಅರಘಾತ ಅರಘಾಟಿ(16) ಎಂದು ಗುರುತಿಸಲಾಗಿದ್ದು, ಇವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಖಾನಾಪುರ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು, ಕಾರ್ಯಾಚರಣೆಯಲ್ಲಿ ನಿನ್ನೆ ಪೊಲೀಸರಿಗೆ ಇಬ್ಬರು ಯುವಕರ ಬಟ್ಟೆ, ಮತ್ತು ಮೊಬೈಲ್ ಫೋನ್ಗಳು ಹಾಲತ್ರಿ ಹಳ್ಳದ ಬಳಿ ಪತ್ತೆಯಾಗಿದ್ದವು.
ನಿನ್ನೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರೂ ಯುವಕರು ಪತ್ತೆಯಾಗಿರಲಿಲ್ಲ, ಇಂದು ಬೆಳಿಗ್ಗೆ ಇಬ್ಬರು ಯುವಕರ ಶವಗಳು ಪತ್ತೆಯಾಗಿದ್ದು, ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.