ಬೆಂಗಳೂರು: ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಧಾರಕಾರ ಮಳೆಯಾಗುತ್ತಿದೆ. ಇಂದು ಕೂಡ ಸಂಜೆಯಿಂದಲೇ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಪ್ರಮುಖ ಏರಿಯಾಗಳಾದ ಹೆಬ್ಬಾಳ, ಮಲ್ಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಆರ್.ಆರ್ ನಗರ, ಕೊತ್ನೂರು ದಿಣ್ಣೆ, ಜಯನಗರ ಸೇರಿದಂತೆ ಹಲವೆಡೆ ಜೋರು ಮಳೆಯಾಗುತ್ತಿದೆ.
A flooded street in #Rajajinagar today noon after the #rains. Video by Muthu P @BBMPCOMM @BngWeather @nimmasuresh #BengaluruRains pic.twitter.com/pjTThyLr40
— anil lulla (@anil_lulla) October 11, 2021
ಇನ್ನು, ಭಾರೀ ಮಳೆಯಾಗುತ್ತಿದ್ದು, ನಗರದ ಹಲವು ಕಡೆ ಮನೆ, ಅಂಗಡಿಗಳಿಗೆ ನೀರು ನುಗ್ಗುತ್ತಿದೆ. ವಾರದಿಂದ ದಿಢೀರ್ ಸುರಿಯುತ್ತಿರುವ ಮಳೆಯಬ್ಬರಕ್ಕೆ ಜನರಿಗೆ ದಂಗು ಬಡಿದಂತಾಗಿದೆ. ಇನ್ನೊಂದಷ್ಟು ದಿನಗಳ ಕಾಲ ಮಳೆಯಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.