ಲಾಕ್ ಡೌನ್ ಹಿನ್ನೆಲೆ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳು ನೀಡುತ್ತಿರುವ ನಟ ಪ್ರಥಮ್ : ಸಾಥ್ ನೀಡಿದ ಸರ್ವೋತ್ತಮ ಜಾರಕಿಹೊಳಿ, ಸನತ್ ಜಾರಕಿಹೊಳಿ
ಬೆಳಗಾವಿ: ಲಾಕ್ ಡೌನ್ ಹಿನ್ನೆಲೆ ಬಡ ಜನರು ಆಹಾರಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಂತಹ ಬಡ ಕುಟುಂಬಕ್ಕೆ ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ದಿನಸಿ ವಸ್ತುಗಳನ್ನು ನೀಡುತ್ತಿದ್ದಾರೆ. ಇವರ ತಂಡಕ್ಕೆ ಭೀಮಶಿ ಜಾರಕಿಹೊಳಿ ಪುತ್ರ ಸರ್ವೋತ್ತಮ ಜಾರಕಿಹೊಳಿ ಅವರು ಸಾಥ್ ನೀಡಿದ್ದಾರೆ.
ಪ್ರಥಮ್ ಹಾಗೂ ಸರ್ವೋತ್ತಮ ಉತ್ತಮ ಸ್ನೇಹಿತರಾಗಿದ್ದಾರೆ. ಪ್ರಥಮ್ ತಮ್ಮ ತಂಡದೊಂದಿಗೆ ಬಿದರ್ ಹಾಗೂ ತುಮಕೂರನಲ್ಲಿ ಬಡವರಿ ಸಹಾಯ ಮಾಡುತ್ತಿರುವ ಮಾಹಿತಿ ತಿಳಿದ ಮೇಲೆ ಸ್ವತಃ ನಟ ಪ್ರಥಮ್ ಗೆ ಕರೆ ಮಾಡಿ ಸಹಾಯ ಮಾಡಲು ಮುಂದಾಗಿದ್ದಾರೆ.
ಸರ್ವೋತ್ತಮ ಜಾರಕಿಹೊಳಿ ಹಾಗೂ ಸಹೋದರ ಸನತ್ ಜಾರಕಿಹೊಳಿ ಅವರು ತಮ್ಮ ಪಾಕೇಟ್ ಹಣವನ್ನು ಜಮೆ ಮಾಡುವ ಮೂಲಕ ಆ ಹಣದಲ್ಲಿ ಬಡವರಿಗೆ ರೇಷನ್ ಅಗತ್ಯ ವಸ್ತುಗಳನ್ನೂ ಕೊಡಿಸಿದ್ದಾರೆ. ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ನಿಮಗೆ ಇನ್ನೂ ಏನಾದ್ರ ಅಗತ್ಯ ವಸ್ತುಗಳು ಬೇಕಿದ್ರೆ ತಿಳಿಸಿ, ನಾವು ಕೊಡಿಸುವ ಮೂಲಕ ಸಹಾಯ ಮಾಡುವ ಅವಕಾಶ ದೊರೆಯಲಿದೆ ಎಂದು ನಟ ಪ್ರಥಮ್ ಅವರಿಗೆ ಹೇಳಿದ್ದಾರೆ.