Breaking News
Home / ರಾಜಕೀಯ / ಅಯ್ಯಯ್ಯೋ ನಮಗೆ ಯಾರೂ ಕನ್ಯೆ ಕೊಡ್ತಿಲ್ರಿ..! ಕನ್ಯೆ ಕೊಟ್ಟು ಪುಣ್ಯ ಕಟ್ಟಿಕೊಳ್ರಿ..!

ಅಯ್ಯಯ್ಯೋ ನಮಗೆ ಯಾರೂ ಕನ್ಯೆ ಕೊಡ್ತಿಲ್ರಿ..! ಕನ್ಯೆ ಕೊಟ್ಟು ಪುಣ್ಯ ಕಟ್ಟಿಕೊಳ್ರಿ..!

Spread the love

ಗದಗ: ಅಯ್ಯಯ್ಯೋ ನಮಗೆ ಯಾರೂ ಕನ್ಯೆ ಕೊಡ್ತಿಲ್ರಿ ಅಂತ ಈ ಗ್ರಾಮದ ಯುವಕರು ಗೋಳಾಡ್ತಿದ್ದಾರೆ. ಸುಮಾರು 10 ವರ್ಷಗಳಿಂದ ಮದುವೆಗಳೇ ನಡೆದಿಲ್ಲವಂತೆ. ಯಾಕಂದ್ರೆ ಇಲ್ಲಿನ ಯುವಕರಿಗೆ ಯಾರೂ ಕನ್ಯೆ ಕೊಡ್ತಿಲ್ವಂತೆ. ಹೀಗಂತ ಇಲ್ಲಿನ ಯುಕವರೇ ಗೋಳಾಡ್ತಿದ್ದಾರೆ.

ಹೌದು, ಗದಗ ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದ ಯುವಕರ ಹಾಗು ಪೋಷಕರ ಗೋಳಿನ ಮಾತುಗಳಿವು. ಮಲಪ್ರಭಾ ನದಿಯ ಸಂತ್ರಸ್ತರ ಗೋಳು ಇದು. ಅಂದಹಾಗೆ ಈ ಗ್ರಾಮದ ಜನರಿಗೆ ವಾಸಿಸೋಕೆ ಯೋಗ್ಯವಾದ ಒಂದೇ ಒಂದು ಮನೆ ಇಲ್ಲ. ಮನೆ ಇಲ್ಲ ಅಂದಮೇಲೆ ಯಾರು ತಾನೆ ಕನ್ಯ ಕೊಡ್ತಾರೆ ನೀವೆ ಹೇಳಿ. ಇವರಿಗೆ ಮನೆ ಕಟ್ಟಿಸಿಕೊಳ್ಳಲು ಜಾಗವೂ ಇಲ್ಲ. ಇದರಿಂದ ಈ ಗ್ರಾಮದ ಜನರಿಗೆ ಅನ್ಯ ಗ್ರಾಮದವರು ಕನ್ಯೆ ಕೊಡ್ತಿಲ್ಲ. ಈ ಸಮಸ್ಯೆ ಈ ಗ್ರಾಮದ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಮ್ಮ ಮಕ್ಕಳಿಗೆ ಹೇಗಪ್ಪ ಮದುವೆ ಮಾಡೋದು ಅಂತ ಪೋಷಕರು ಚಿಂತೆಗೀಡಾಗಿದ್ದಾರೆ. ಕೆಲವರು ತಮ್ಮ ಮಕ್ಕಳ ಮದುವೆ ಮಾಡೋಕೆ ಅಂತಾನೆ ಊರು ಬಿಟ್ಟು ಬೇರೆ ಊರಲ್ಲಿ ಹೋಗಿ ನೆಲೆಸಿದ್ದಾರೆ. ಹೀಗಾಗಿ ಈ ಭಾಗದ ಶಾಸಕರಾಗಿರುವ ಸಿ ಸಿ ಪಾಟೀಲರೇ ನಮಗೆ ಕನ್ಯೆ ನೋಡಿ ಮದುವೆ ಮಾಡಿಸಿ ಅಂತ ಒತ್ತಾಯ ಮಾಡ್ತಿದ್ದಾರೆ.

ಇಷ್ಟಕ್ಕೆಲ್ಲ ಕಾರಣ ಈ ಭಾಗದ ಶಾಸಕರು ಮತ್ತು ಅಧಿಕಾರಿಗಳೇ ಕಾರಣ ಅಂತ ಈ ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ. ಯಾಕೆಂದರೆ ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿ 2009 ರಲ್ಲಿಯೇ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದವರು ಇವರು. ಆ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರಿಗಾಗಿ ಕಟ್ಟಿಸಿದ್ದ ಸುಮಾರು 500 ಮನೆಗಳನ್ನ ಇನ್ನೂ ಹಂಚಿಕೆ ಮಾಡಿಲ್ಲ. ಪ್ರವಾಹ ಬಂದು ಇಡೀ ಊರು ಕೊಚ್ಚಿಹೋಗಿದೆ. ಹೀಗಾಗಿ ಊರನ್ನ ಬೇರೆ ಕಡೆ ಸ್ಥಳಾಂತರ ಮಾಡಿ ಮನೆ ಕಟ್ಟಿಸಿ ಸರಿಸುಮಾರು 10 ವರ್ಷ ಕಳೆದಿವೆ, ಆದರೂ ಸಹ ಇವರಿಗೆ ಮನೆ ಹಂಚಿಕೆ ಮಾಡಿಲ್ಲ. ಅವರಿಗೆ ಮನೆ ಹಕ್ಕುಪತ್ರ ವಿತರಣೆ ಮಾಡಿಲ್ಲ. ಇದಕ್ಕೆಲ್ಲ ಕಾರಣ ಅಧಿಕಾರಿಗಳು ಮತ್ತು ಶಾಸಕರ ಹುಸಿ ಭರವಸೆಗಳೇ ಕಾರಣ ಅಂತ ಹೇಳ್ತಿದ್ದಾರೆ.

ಮನೆ ಹಂಚಿಕೆ ಮಾಡಿ ಮಾಡಿ ಅಂತ ಹೇಳಿ, ಹೇಳಿ ಸುಸ್ತಾಗಿದ್ದಾರೆ. ಈ ಸಮಸ್ಯೆಯಿಂದ ಇಂದು ಗ್ರಾಮದಲ್ಲಿ ಯಾರೊಬ್ಬರಿಗೂ ಸ್ವಂತ ಸೂರಿಲ್ಲ. ಕೊನೆಪಕ್ಷ ತಾವಾದರೂ ಮನೆಕಟ್ಟಿಸಿಕೊಳ್ಳೋಣ ಅಂದ್ರೆ ಅವರ ಹೆಸರಲ್ಲಿ ಜಾಗವಿಲ್ಲ. ಹೀಗಾಗಿ ತಮಗೆ ಇಷ್ಟ ಬಂದಲ್ಲಿ ತಗಡಿನ ಶೆಡ್​ಗಳನ್ನ ನಿರ್ಮಿಸಿಕೊಂಡು ಜೀವನ ದೂಡ್ತಿದ್ದಾರೆ.

ಇದೇ ರೀತಿ ಬಯಲಿನಲ್ಲಿ ಎಷ್ಟು ದಿನ ಅಂತ ಜೀವನ ನಡೆಸೋದು ನೀವೇ ಹೇಳಿ. ಮದುವೆ ಮಾಡಿಕೊಳ್ಳೋದಕ್ಕೆ ಈಗ ಯುವಕರು ಪರದಾಡ್ತಿದ್ದಾರೆ. ಸ್ವಂತ ಜಾಗವಿಲ್ಲ ಮನೆ ಇಲ್ಲ ಹೇಗೆ ಇವರಿಗೆ ಮಗಳನ್ನ ಕೊಡೋದು ಅಂತ ಯಾರೂ ಕನ್ಯ ಕೊಡೋದಕ್ಕೆ ಮುಂದೆ ಬರ್ತಿಲ್ಲ.

ಒಬ್ಬ ಯುವಕ ಸರಿ ಸುಮಾರು 25 ಹುಡುಗಿಯರನ್ನು ನೋಡಿ ಬಂದರೂ ಯಾರೂ ಸಹ ಮದುವೆ ಮಾಡಿಕೊಳ್ಳಲು ಒಪ್ಪಲಿಲ್ಲವಂತೆ. ಮನೆಯಿಲ್ಲ ನಮ್ಮ ಮಗಳನ್ನ ಹೇಗೆ ನೋಡಿಕೊಳ್ತಿಯಾ ಅಂತ ಪ್ರಶ್ನೆ ಮಾಡ್ತಾರಂತೆ. ಹೀಗಾಗಿ ಶಾಸಕರೇ ನೀವಾದರೂ ನಮ್ಮ ಗೋಳು ನೋಡಿ ಕನ್ಯೆ ನೋಡಿ ಮದುವೆ ಮಾಡಿಸಿ ಅಂತ ಅಳಲು ತೋಡಿಕೊಳ್ತಿದ್ದಾರೆ ಗ್ರಾಮದ ಯುವಕರು.

ಇನ್ನು ಸರಕಾರ ಕಟ್ಟಿಸಿರುವ ಬಹುತೇಕ ಮನೆಗಳು ಬಿದ್ದು ಹೋಗಿವೆ. ಕೆಲವು ಮನೆಗಳಿಗೆ ಕಿಟಕಿ ಬಾಗಿಲುಗಳೇ ಇಲ್ಲ, ಎಲ್ಲ ಕಿತ್ತುಹೋಗಿವೆ. ವಿದ್ಯುತ್ ವ್ಯವಸ್ಥೇ ಇಲ್ಲ. ರಸ್ತೆಗಳಿಲ್ಲ. ಮಳೆ ಬಂದರೆ ಇಡೀ ರಸ್ತೆಗಳು ಕೆಸರಿನಿಂದ ತುಂಬಿಹೋಗ್ತವೆ. ಇದರಿಂದ ತಮ್ಮ ವಾಹನಗಳನ್ನ ರಸ್ತೆಗೆ ತಂದು ನಿಲ್ಲಿಸುತ್ತಾರಂತೆ. ಇನ್ನು ಸ್ನಾನ ಮಾಡೋಕೆ ಸೂಕ್ತ ಜಾಗ ಇಲ್ಲ ಮಹಿಳೆಯರೂ ಸಹ ಹೊರಗಡೆ ಸ್ನಾನ ಮಾಡ್ತಿದ್ದಾರೆ. ಒಟ್ಟಿನಲ್ಲಿ ಈ ಗ್ರಾಮಸ್ಥರು ಬಕಪಕ್ಷಿಗಳಂತೆ ಹತ್ತು ವರ್ಷಗಳಿಂದ ಮನೆಗಾಗಿ ಕಾದು, ಕಾದು ಸುಸ್ತಾಗಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ