ಬಳ್ಳಾರಿ: ಜಿಲ್ಲೆಯ ಮಕ್ಕಳಲ್ಲೂ ಕೊರೊನಾ ವೈರಸ್ ಕಾಣಿಸಿಕೊಳ್ತಿದ್ದು.. ವಿಜಯನಗರ ಜಿಲ್ಲೆಯ ಕೊಡ್ಲಗಿ ತಾಲೂಕಿನ ಶ್ರೀಕಂಠಪುರ ತಾಂಡಾದ 8 ಮಕ್ಕಳಲ್ಲಿ ಕೊರೊನಾ ಕಾಣಿಕೊಂಡಿದೆ. ಹೀಗಾಗಿ, ಇಡೀ ತಾಂಡಾದ ಜನರಿಗೆ ಆತಂಕ ಶುರುವಾಗಿದೆ.
8 ರಿಂದ 15 ವರ್ಷದೊಳಗಿನ ಎಂಟು ಮಕ್ಕಳಿಗೆ ಕೋವಿಡ್ ವೈರಸ್ ಧೃಡಪಟ್ಟಿದ್ದು, ಎಲ್ಲರು ಭಯದ ವಾತಾವರಣದಲ್ಲಿದ್ದಾರೆ. ಕಳೆದ ಮಂಗಳವಾರವಷ್ಟೇ ಅರ್ಟಿಪಿಸಿಆರ್ ಟೆಸ್ಟ್ ನಡೆದಿತ್ತು, ಈ ಪೈಕಿ 8 ಮಕ್ಕಳಲ್ಲಿ ಕೊರೊನಾ ದೃಢ ಪಟ್ಟಿತ್ತು. ಇಂದು ಕೂಡ 20 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ದಿನದಿಂದ ದಿನಕ್ಕೆ ಕೊರೊನಾ ಕೇಸ್ ಜಾಸ್ತಿಯಾಗ್ತಾನೇ ಇದ್ದು, ಇಲ್ಲಿಯವರಗೂ ಈ ತಾಂಡಾದಲ್ಲಿ 100 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ.