Breaking News
Home / ರಾಜ್ಯ / ಶ್ರೀಗಳೊಬ್ಬರು ಭಕ್ತರು, ಮಠ ದೂರ ಉಳಿದು ಹೊಲಗದ್ದೆಯಲ್ಲಿ ಕುರಿ ಕಾಯತೊಡಗಿದ್ದಾರೆ‌.

ಶ್ರೀಗಳೊಬ್ಬರು ಭಕ್ತರು, ಮಠ ದೂರ ಉಳಿದು ಹೊಲಗದ್ದೆಯಲ್ಲಿ ಕುರಿ ಕಾಯತೊಡಗಿದ್ದಾರೆ‌.

Spread the love

ಹಾವೇರಿ : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಕ್ತರ ಹಾಗೂ ತಮ್ಮ ಆರೋಗ್ಯದ ಸುರಕ್ಷತೆಗಾಗಿ ಶ್ರೀಗಳೊಬ್ಬರು ಭಕ್ತರು, ಮಠ ದೂರ ಉಳಿದು ಹೊಲಗದ್ದೆಯಲ್ಲಿ ಕುರಿ ಕಾಯತೊಡಗಿದ್ದಾರೆ‌.

ಹೌದು. ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಕಳೆದ ಕೆಲ ದಿನಗಳಿಂದ ಮಠ ತೊರೆದು ಕುರಿಗಳನ್ನ ಕಾಯುತ್ತಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಕಾಗಿನೆಲೆ ಕನಕ ಗುರುಪೀಠ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಮತ್ತು ಬಳ್ಳಾರಿ ಜಿಲ್ಲೆಯ ಮೈಲಾರದ ಶಾಖಾ ಮಠಗಳಿಗೆ ನಿತ್ಯ ನೂರಾರು ಭಕ್ತರ ಆಗಮಿಸುತ್ತಿದ್ದಾರೆ.

ಭಕ್ತರಿಗೆ ಕೊರೊನಾ ಹೆಚ್ಚಳದಿಂದ ಮಠಕ್ಕೆ ಆಗಮಿಸದಂತೆ ಶ್ರೀಗಳು ಮನವಿ ಮಾಡಿಕೊಂಡರು ಸಹ ಭಕ್ತರು ಪ್ರತಿ ಆಗಮಿಸುತ್ತಿದ್ದಾರೆ‌. ಇದರಿಂದ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ ಕುರಿ ಪಾಲನೆಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮುಂದಾಗಿದ್ದಾರೆ.

ಮಠಕ್ಕೆ ಸೇರಿದ ಸುಮಾರು 300ಕ್ಕೂ ಹೆಚ್ಚು ಕುರಿಗಳನ್ನು ಬಳ್ಳಾರಿ ಜಿಲ್ಲೆಯ ಮೈಲಾರ ಅಡವಿಯಲ್ಲಿ ಉಳಿದುಕೊಂಡು ನಿರಂಜನಾನಂದ ಪುರಿ ಸ್ವಾಮೀಜಿ ಕುರಿ ಮೇಯಿಸುತ್ತಿದ್ದಾರೆ.,


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ