ಬೆಳಗಾವಿ ಗ್ರಾಮೀಣ ಕ್ಷೇತ್ರದ #ತುರಮರಿ ಗ್ರಾಮದ ದಲಿತ ಪರ ಇರುವ ವಿವಿಧ ಸಂಘಟನೆಗಳ ಜೊತೆ ಬೆಳಗಾವಿ ಚುಣಾವಣೆಯ ಪ್ರಯುಕ್ತ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರ ಪ್ರಚಾರ ಕಾರ್ಯಕ್ರಮ ಜರುಗಿತು.
ಈಗಿನ ದೇಶದ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ಬಗ್ಗೆ ರಾಜ್ಯ ಹಾಗೂ ಬಿಜೆಪಿ ಸರ್ಕಾರಗಳಿಗೆ ಕಿಂಚಿತ್ತು ಕಾಳಜಿ ಇಲ್ಲದೇ ಇರುವುದು ಪ್ರತಿಯೊಬ್ಬ ಮತ ಮಹಾಪ್ರಭುವಿನ ಉತ್ತರವಾಗಿದೆ, ಈ ಸರ್ಕಾರಗಳು ಅಚ್ಛೇ ದಿನಗಳು ಬರ್ತಾವೆ ಅಂತಾ ಹೇಳ್ತಾ ಹೇಳ್ತಾ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವುದರಲ್ಲಿ ಮಾತ್ರ ನಿರತವಾಗಿವೆ, ಈಗಿನ ಈ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳು ಬೆಲೆ ಗಗನಕ್ಕೆ ಏರಿದ್ದು, ಬಡವರ ಮೇಲೆ ಬರೆ ಎಳೆಯುತ್ತಿವೆ.
ಬಡವರ, ಶ್ರಮಿಕರ ಹಾಗೂ ರೈತರ ಬಗ್ಗೆ ಯಾವ ಕಾಳಜಿಯನ್ನು ಇಟ್ಟುಕೊಳ್ಳದ ಈ ಸರ್ಕಾರಗಳ ಬಗ್ಗೆ ಜನರೇ ಉತ್ತರಿಸಲಿದ್ದಾರೆ, ಎಷ್ಟೋ ಜನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮನೆಯ ಉಪಜೀವನ ಸಾಗಿಸಲಿಕ್ಕೆ ಹರ ಸಾಹಸ ಮಾಡುತ್ತಿದ್ದಾರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾವ ನ್ಯಾಯ ಸ್ವಾಮಿ ಬಡವರು ಹೇಗೆ ಬದುಕಬೇಕು. ಬಡವರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಬಡವರ ಪರ ನಿಲ್ಲಿ, ನಿಮ್ಮ ಅಚ್ಛೇ ದಿನಗಳನ್ನಾ ಈಡೇರಿಸಿ.
ಭಾರತದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕರಲ್ಲಿ ಡಾ|| ಬಿ ಆರ್ ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ, ಜೊತೆಗೆ ಭಾರತದ ಸಂವಿಧಾನ ರಚನೆಯಲ್ಲಿ ಗಣನೀಯ ಕೊಡುಗೆ ನೀಡಿದ ಅಂಬೇಡ್ಕರ್ ಅವರ ಆದರ್ಶಗಳ ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮುಖೇನ ಶ್ರೀ ಸತೀಶಣ್ಣನವರನ್ನು ಲೋಕಸಭೆಗೆ ಪ್ರಚಂಡ ಬಹುಮತಗಳಿಂದ ಆರಿಸಿ ತರೋಣ.