ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಹಿನ್ನಲೆಯಲ್ಲಿ ಇವತ್ತು ಬಡಸ್ ಕೆ ಎಚ್ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಡಿ ಕೆ ಶಿವಕುಮಾರವರ ನೇತ್ರತ್ವದಲ್ಲಿ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರ ಬೃಹತ್ ಪ್ರಚಾರ ಸಭೆಯನ್ನು ಕೈಗೊಳ್ಳಲಾಯಿತು.
ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಅವಲೋಕಿಸುವ ಮುಖೇನ ಪ್ರಚಾರಕ್ಕೆ ಚಾಲನೆಯನ್ನು ನೀಡಲಾಯಿತು. ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಂತಹ ಕೊಡುಗೆಗಳನ್ನು ಸ್ಮರಿಸುತ್ತಾ ಅನೇಕ ಮಹನೀಯರು ಹಗಲು ರಾತ್ರಿಯನ್ನದೇ ದೇಶಕ್ಕಾಗಿ ದುಡಿದು ದೇಶವನ್ನು ಸುಭದ್ರವಾಗಿ ಕಾಪಾಡಿಕೊಂಡು ಬಂದಿದ್ದಾರೆ, ಪಂಡಿತ್ ಜವಾಹರಲಾಲ್ ನೆಹರೂ ಅವರ ತತ್ವ ಸಿದ್ಧಾಂತಗಳು, ದೂರದೃಷ್ಟಿಯೇ ಸ್ವತಂತ್ರ ಭಾರತದ ಪ್ರಗತಿ ಇತಿಹಾಸದ ಭದ್ರ ಬುನಾದಿ. ಇದನ್ನು ಉಳಿಸಿಕೊಂಡು ಹೋಗಬೇಕಿರುವುದು ನಮ್ಮಲ್ಲೆರ ಜವಾಬ್ದಾರಿಯಾಗಿದೆ.
ಪಕ್ಷದ ಏಳಿಗೆಗಾಗಿ ನೆಹರೂ ಅವರ ದಿಟ್ಟ ಹೋರಾಟ, ಸ್ಥಳೀಯ ಸಂಸ್ಥೆಗಳಲ್ಲಿ ನಿರ್ವಹಿಸಿದ ಕಾರ್ಯ, ಸ್ಥಳೀಯ ಮಟ್ಟದಿಂದ ಮಾಡಿದ ಕೆಲಸ ಅವರನ್ನು ನಾಯಕರನ್ನಾಗಿ ಬೆಳೆಸಿತು. ಅಂತಹ ಮಹಾನ್ ನಾಯಕನ ಆದರ್ಶಗಳನ್ನು ನೆನಪಿಸಿಕೊಳ್ಳವ ಮುಖೇನ ಇವತ್ತು ಸತೀಶಣ್ಣವರನ್ನು ಲೋಕಸಭೆಗೆ ಆಯ್ಕೆ ಮಾಡುವ ಮುಖಾಂತರ ಅಧಿಕಾರಕ್ಕೆ ತರಬೇಕಿರುವುದು ನಮ್ಮೆಲ್ಲರ ಹೊಣೆ.
ಕಳೆದ ಮೂವತ್ತು ವರ್ಷಗಳಿಂದ ತಮ್ಮದೇ ಆದ ವರ್ಚಿಸ್ಸಿನೊಂದಿಗೆ ಜನರ ಮನದಲ್ಲಿ ಗಟ್ಟಿಯಾಗಿ ಬೇರೂರಿರುವ ಶ್ರೀ ಸತೀಶಣ್ಣನವರು ದಿಟ್ಟ ಹೋರಾಟದ ಮೂಲಕ ಜನಪ್ರಿಯತೆಯನ್ನು ಹೊಂದಿದ್ದು, ಪಕ್ಷದ ಬೆನ್ನೆಲುಬಾಗಿ ಸದಾಕಾಲವೂ ಸಕ್ರಿಯರಾಗಿ ಸಾವಿರಾರು ಕಾರ್ಯಕರ್ತರನ್ನು ಹುಟ್ಟು ಹಾಕಿದ್ದಾರೆ, ಇಂತಹ ಮಹಾನ್ ನಾಯಕನನ್ನು ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಆಯ್ಕೆ ಮಾಡಿ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸೋಣ.