Breaking News
Home / ರಾಷ್ಟ್ರೀಯ / ಎಸಿಬಿ ದಾಳಿಗೆ ಹೆದರಿ 5 ಲಕ್ಷ ರೂ ನಗದನ್ನು ಸುಡಲು ಪ್ರಯತ್ನಿಸಿದ ಅಧಿಕಾರಿ

ಎಸಿಬಿ ದಾಳಿಗೆ ಹೆದರಿ 5 ಲಕ್ಷ ರೂ ನಗದನ್ನು ಸುಡಲು ಪ್ರಯತ್ನಿಸಿದ ಅಧಿಕಾರಿ

Spread the love

ತೆಲಂಗಾಣ : ಎಸಿಬಿ ದಾಳಿಗೆ ಹೆದರಿ ಅಧಿಕಾರಿಯ ಸಹಚರನೊಬ್ಬ ಒಂದು ಅಜಾಗರೂಕತೆಯ ಹಾಗೂ ಹಾಸ್ಯಾಸ್ಪದ ವಾದಂತಹ ಘಟನೆಗೆ ಎಡೆಮಾಡಿಕೊಟ್ಟಿದ್ದರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಎಬಿಸಿ ಅಧಿಕಾರಿಗಳ ದಾಳಿಗೆ ಹೆದರಿ 5 ಲಕ್ಷ ರೂ . ನಗದು ಸುಟ್ಟು ಹಾಕುವ ಯತ್ನ ನಡೆದಿದೆ .

ನೋಟು ಸುಡುತ್ತಿರುವ ಸಂದರ್ಭದಲ್ಲಿ, ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆದಾಗ ನೋಟುಗಳು ಶೇ .70 ರಷ್ಟು ಸುಟ್ಟು ಬಸ್ಮಾ ಬಾಗಿರುವುದು ಕಂಡುಬಂದಿದ್ದು, ಅಧಿಕಾರಿಗಳು ಆ ಸುಟ್ಟ ನೋಟುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ .

ಇದರ ವಿಚಾರಣೆಯ ವೇಳೆ ಸತ್ಯಸಂಗತಿಗಳು ಹೊರಬಿದ್ದಿದ್ದು, ರಂಗಾರೆಡ್ಡಿ ಜಿಲ್ಲೆಯ ತಲಕೊಂಡಪಲ್ಲಿ ಮಂಡಲದ ಕೊರೆಂಟಕುಂಟ್ ಸರ್ಪಂಚ್ ರಾಮುಲು ಅವರು ಬೊಲಾಂಪಲ್ಲಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಅರ್ಜಿ ಸಲ್ಲಿಸಿದ್ದರು . ಈ ಸಂಬಂಧ ವೆಲ್ಕಂಡ ತಹಸೀಲ್ದಾರ್‌ ಅವರಿಗೆ ಪರವಾನಗಿ ನೀಡುವಂತೆ ಮತ್ತು ಸರ್ವೆ ಮಾಡುವಂತೆ ಮನವಿ ಮಾಡಿದ್ದರು . ಆದರೆ ತಹಸೀಲ್ದಾರ್‌ , ವೆಂಕಟಯ್ಯ ಗೌಡ್ ಅವರ ನಿವಾಸದಲ್ಲಿ ಮೀಟಿಂಗ್ ಮಾಡುವಂತೆ ಸಲಹೆ ನೀಡಿದ್ದರು . ಈ ವೇಳೆ , ವೆಂಕಟಯ್ಯ ಗೌಡ್ 6 ಲಕ್ಷ ರೂ . ಲಂಚದ ಬೇಡಿಕೆಯಿಟ್ಟಿದ್ದರು . ಅಂತಿಮವಾಗಿ ಇಬ್ಬರ ನಡುವೆ ಐದು ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಸರ್ಪಂಚ್ ರಾಮುಲು ಎಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ಮುಟ್ಟಿಸಿದ್ದರು . ರಾಮುಲು ವೆಂಕಟಯ್ಯ ಅವರ ಮನೆಗೆ ತೆರಳಿ ಹಣ ನೀಡಿದ್ದರು . ಈ ವೇಳೆ ವೆಂಕಟಯ್ಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು . ವಿಷಯ ಗೊತ್ತಾಗುತ್ತಿದ್ದಂತೆ ವೆಂಕಟಯ್ಯ , ರಾಮುಲು ನೀಡಿದ್ದ ಐದು ಲಕ್ಷ ರೂ . ನಗದನ್ನು ಗ್ಯಾಸ್ ಸ್ಟವ್ ಮೇಲಿರಿಸಿ ಸುಟ್ಟು ಹಾಕುವ ಯತ್ನ ಮಾಡಿದ್ದಾರೆ . ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತಹಸೀಲ್ದಾರ್‌ ಸೈದುಲು ಅವರ ಎಲ್.ಬಿ. ನಗರ ನಿವಾಸದ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.


Spread the love

About Laxminews 24x7

Check Also

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ, 12 ದಿನದೊಳಗೆ ತನಿಖೆಯ ವರದಿ ಸಲ್ಲಿಸುವಂತೆ ಸೂಚನೆ : ಜಿ.ಪರಮೇಶ್ವರ್

Spread the loveತುಮಕೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಪುತ್ರಿ‌ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ