Breaking News
Home / ಸಿನೆಮಾ / ಮಾರ್ಚ್​​ 31ರ ರಾತ್ರಿ ಗೊತ್ತಾಗಿದ್ರೂ ಸಿನಿಮಾ ಬಿಡುಗಡೆ​ ಮಾಡ್ತಿರ್ಲಿಲ್ಲ: ಅಪ್ಪು ​ಬೇಸರ

ಮಾರ್ಚ್​​ 31ರ ರಾತ್ರಿ ಗೊತ್ತಾಗಿದ್ರೂ ಸಿನಿಮಾ ಬಿಡುಗಡೆ​ ಮಾಡ್ತಿರ್ಲಿಲ್ಲ: ಅಪ್ಪು ​ಬೇಸರ

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹವಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಕಟ್ಟುನಿಟ್ಟಿನ ನಿಯಮವಳಿಗಳನ್ನ ಬಿಡುಗಡೆ ಮಾಡಿದ್ದು, 8 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ. 50%ರಷ್ಟು ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಬಿಡುಗಡೆಯಾದ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಚಿತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಚಿತ್ರತಂಡ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದೆ.

ಸರ್ಕಾರದ ಈ ನಿರ್ಧಾರದ ಬಗ್ಗೆ ಬೇಸರದಲ್ಲಿಯೇ ಮಾತನಾಡಿದ ಪುನೀತ್‌, ‘ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗೆ ಮಾತ್ರ ಅವಕಾಶ ವಿಚಾರ 3-4 ದಿನಗಳ ಹಿಂದೆಯೇ ಗೊತ್ತಿದ್ರೆ ನಾವು ಸಿನಿಮಾ ಬಿಡುಗಡೆ​​ ಮಾಡ್ತಿರಲಿಲ್ಲ. ಮುಂದಕ್ಕೆ ಹಾಕ್ತಿದ್ದಿವಿ. ಸರ್ಕಾರದ ಟ್ವೀಟ್​ ನೋಡಿಯೇ ರಿಲೀಸ್​ ಮಾಡಿದ್ದೇವೆ. ಈ ವಿಚಾರ 31ರಾತ್ರಿ ಗೊತ್ತಾಗಿದ್ರ ಕೂಡ ಸಿನಿಮಾ ರಿಲೀಸ್​ ಮಾಡ್ತಿರಲಿಲ್ಲ. ಈಗ ಸಿನಿಮಾ ರಿಲೀಸ್​ ಆಗಿ ಒಳ್ಳೆ ಅಭಿಪ್ರಾಯ ಬಂದು, ಕಲೆಕ್ಷನ್​ ಬರುವಾಗ ಹೀಗೆ ಮಾಡಿದ್ರೆ ಒಂದು ಒಳ್ಳೆ ಕನ್ನಡ ಸಿನಿಮಾನ ಕೊಲೆ ಮಾಡಿದಂತೆ’ ಎಂದಿದ್ದಾರೆ.

ಇನ್ನು ಚಿತ್ರ ಬಿಡುಗಡೆಯಾಗಿ ಎರಡು ದಿನ ಮಾತ್ರ ಕಳೆದಿದೆ. ಜನ ಫ್ಯಾಮಿಲಿ ಸಮೇತರಾಗಿ ಸಿನಿಮಾ ನೋಡೋಕೆ ಬರ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ರೀತಿಯಾದ ನಿರ್ಧಾರ ಮಾಡಿರೋದು ನಮಗೆ ಶಾಕ್‌ ನೀಡಿದೆ. ಭಾನುವಾರದವರೆಗೂ ಟಿಕೆಟ್​ ಬುಕ್​ ಆಗಿದ್ದು, ಜನ ಗೊಂದಲಕ್ಕೊಳಗಾಗುತ್ತಾರೆ. ನಮ್ಗೆ ಏನ್‌ ಮಾಡ್ಬೇಕು ಅನ್ನೋದೆ ಗೊತ್ತಾಗ್ತಿಲ್ಲ. ದಯವಿಟ್ಟು ಕೆಲವು ದಿನಗಳ ಕಾಲ ಈ ನಿಯಮವನ್ನ ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷ

Spread the love ಕನ್ನಡದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷವಾಗುತ್ತಿದೆ. ಪುಣ್ಯಸ್ಮರಣೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ