ಬೆಂಗಳೂರು: ಸದಾಶಿವನಗರದಲ್ಲಿ ಸಚಿವರೊಬ್ಬರ ಮನೆ ಮುಂದೆ ಇಂದು ಮಾರಾಮಾರಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ರ ನಿವಾಸದ ಬಳಿ ಶುಕ್ರವಾರ ಬೆಳಗ್ಗೆ ಸಿಬ್ಬಂದಿಗಳ ನಡುವೆ ಗಲಾಟೆ ಆಗಿದೆ. ಸಚಿವರ ಗನ್ಮಾನ್ ತಿಮ್ಮಯ್ಯರಿಂದ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ. ಸೋಮಶೇಖರ್ ಸಚಿವರ ಮನೆಯ ಖಾಸಗಿ ಡ್ರೈವರ್. ಇವರಿಬ್ಬರು ಮನೆ ಮುಂದೆ ಉರುಳಾಡಿಕೊಂಡು, ಅಂಗಿ ಕಿತ್ತು ಬರುವಂತೆ ಕಿತ್ತಾಡಿಕೊಂಡಿದ್ದಾರೆ.
ನಿನ್ನೆ ಚಹಾ ಮಾರುತ್ತಿದ್ದ ಅಂಗವಿಕಲನಿಗೆ ತಿಮ್ಮಯ್ಯ ಹೊಡೆದಿದ್ದರು. ಇದನ್ನು ಸೋಮಶೇಖರ್ ವಿರೋಧಿಸಿದ್ದರು. ಇದೇ ವಿಚಾರವಾಗಿ ಇಂದು ಗಲಾಟೆ ಆಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಗರಂ ಆದ ಸಚಿವರು ಗನ್ಮ್ಯಾನ್ ತಿಮ್ಮಯ್ಯನನ್ನು ತಮ್ಮ ಬಳಿ ಕೆಲಸಕ್ಕೆ ಬಾರದಂತೆ ಸೂಚಿಸಿದ್ದಾರೆ. (ಸಚಿವರ ಮನೆ ಮುಂದೆ ಸಿಬ್ಬಂದಿ ಗಲಾಟೆಯ ವಿಡಿಯೋಗೆ ಕೆಳಗೆ ಕೊಟ್ಟಿರುವ ವಿಜಯವಾಣಿ ಫೇಸ್ಬುಕ್ ಲಿಂಕ್ ಕ್ಲಿಕ್ ಮಾಡಿ. ಹೆಗಲಲ್ಲಿ ಬ್ಯಾಗ್ ಹಾಕಿರುವ ವ್ಯಕ್ತಿ ಸೋಮಶೇಖರ್, ಮತ್ತೊಬ್ಬ ಗನ್ಮ್ಯಾನ್ ತಿಮ್ಮಯ್ಯ)