ಬೆಂಗಳೂರು,ಮಾ.5- ಹುಬ್ಬಳ್ಳಿ-ಧಾರವಾಡ ನಡುವೆ ನೇರ ರೈಲು ಮಾರ್ಗ ನಿರ್ಮಣ ಮಾಡಿ ಪ್ರಯಾಣದ ಅವಯನ್ನು 45 ನಿಮಿಷಗಳಿಗೆ ಇಳಿಸಲು ಸರ್ಕಾರ ಯೋಜನೆ ರೂಪಿಸಿದೆ. ವಿಸ್ತೃತ ಯೋಜನೆ ವರದಿ ಸಿದ್ದಗೊಂಡ ಬಳಿಕ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ವಿಧಾನಪರಿಷತ್ನ ಪ್ರಶ್ನೋತ್ತರ ಅವಯಲ್ಲಿ ಆಡಳಿತ ಪಕ್ಷದ ಸದಸ್ಯ ಮಹಾಂತೇಶ್ ಕವಟಗಿ ಅವರ ಕೇಳಿದ ಪ್ರಶ್ನೆಗೆ ಉತ್ತ ನೀಡಿದ ಸಚಿವರು, ಧಾರವಾಡದಿಂದ ಬೆಳಗಾವಿಗೆ ಹೋಗಬೇಕಾದರೆ ಲೋಂಡಾ ಮಾರ್ಗವಾಗಿ ಬಳಸಿಕೊಂಡು ಬರಬೇಕು. ನಾಲ್ಕು ಗಂಟೆ ಪ್ರಯಾಣದ ಅವಧ ಇದೆ. ನೇರವಾಗಿ ರೈಲು ಮಾರ್ಗ ನಿರ್ಮಿಸಲು ದೇವೇಗೌಡರು ಪ್ರಧಾನಿಯವರು ಸಮೀಕ್ಷೆಗೆ ಆದೇಶ ನೀಡಿದ್ದರು.
ಇತ್ತೀಚೆಗೆ ನಿಧನರಾದ ಸುರೇಶ್ ಅಂಗಡಿಯವರು, ಯೋಜನೆಗಾಗಿ 988 ಕೋಟಿ ರೂ.ಗಳ ಅಂದಾಜು ವೆಚ್ಚ ಯೋಜನೆ ರೂಪಿಸಿದ್ದರು. 335 ಎಕರೆ ಭೂಮಿ ಸ್ವಾೀನವಾಗಬೇಕಿದೆ. ಯೋಜನೆ ಮುಕ್ತಾಯಗೊಂಡರೆ 31 ಕಿ.ಮೀ ಅಂತರ ಕಡಿಮೆಯಾಗುತ್ತದೆ. ಪ್ರಯಾಣದ ಅವ 45 ನಿಮಿಷಕ್ಕೆ ಸೀಮಿತವಾಗಲಿದೆ ಎಂದು ಹೇಳಿದರು. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ತಮ್ಮ ಸರ್ಕಾರಕ್ಕೆ ಆಸಕ್ತಿ ಇದೆ ಎಂದು ಸ್ಪಷ್ಟಪಡಿಸಿದರು