ರಾಮನಗರ: ರೇಣುಕಾಚಾರ್ಯ ಬಗ್ಗೆ ಹೇಳೊಕೇನಿಲ್ಲ. ಅವ್ರ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಸಂತ್ರಸ್ತೆಗೆ ಅವ್ರು ಮಾಡಿದ ಮೋಸ ಅನ್ಯಾಯ ಒಂದೊಂದಲ್ಲ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ‘ ರೇಣುಕಾಚಾರ್ಯ ಅವ್ರು ಸಂತ್ರಸ್ತೆಯನ್ನ ಯಾವ ಹೀನಾಯ ಸ್ಥಿತಿಗೆ ತಳ್ಳಿದ್ದಾರೆ ಅನ್ನೋದು ಗೊತ್ತಿದೆ. ಕೇಸ್ ವಾಪಸ್ ತೆಗೆದುಕೊಳ್ಳೋದಕ್ಕೆ ಹೇಳಿ ನಂತ್ರ ಅವರಿಗೆ ಒಂದು ರೂಪಾಯಿ ಕೂಡ ಕೊಡದೇ ಮೋಸ ಮಾಡಿದ್ದಾರೆ. ಬೇಕಾದ್ರೆ, ಅವರನ್ನೇ ಹೋಗಿ ಕೇಳಿ’ ಎಂದರು. ಇನ್ನು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧವೂ ಕಿಡಿಕಾರಿದರು.