Home / ರಾಜ್ಯ / ಚಿಕ್ಕೋಡಿಯ ಈ ಆಸ್ಪತ್ರೆಯಲ್ಲಿ ಹಿತ್ತಲ ಗಿಡ ‘ಮದ್ದು’

ಚಿಕ್ಕೋಡಿಯ ಈ ಆಸ್ಪತ್ರೆಯಲ್ಲಿ ಹಿತ್ತಲ ಗಿಡ ‘ಮದ್ದು’

Spread the love

ಚಿಕ್ಕೋಡಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಒಬ್ಬರು ರೋಗಿಗಳ ಆರೋಗ್ಯ ಸೇವೆಯೊಂದಿಗೆ ಆಸ್ಪತ್ರೆ ಆವರಣದಲ್ಲಿ ಆಯುರ್ವೇದ ಸಸ್ಯೋದ್ಯಾನ ಅಭಿವೃದ್ಧಿಪಡಿಸಿ, ಆಯುರ್ವೇದ ಔಷಧಿ ಕುರಿತು ಜನಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ ವೈದ್ಯಾಧಿಕಾರಿಯಾಗಿರುವ ಡಾ.ಲಕ್ಷ್ಮೀಕಾಂತ ಕಡ್ಲೆಪ್ಪಗೋಳ ಅವರು ಆಸ್ಪತ್ರೆ ಆವರಣ ಖಾಲಿ ಜಾಗದಲ್ಲಿ ಆಯುರ್ವೇದದ ಸಸಿಗಳನ್ನು ಬೆಳೆಸಿದ್ದಾರೆ.

ಡಾ.ಕಡ್ಲೆಪ್ಪಗೋಳ ಅವರು ಸರ್ಕಾರ ಜಾರಿಗೊಳಿಸಿದ್ದ ‘ಕಾಯಕಲ್ಪ’ ಯೋಜನೆಯನ್ನು ಬಳಸಿಕೊಂಡು ಆಸ್ಪತ್ರೆಯ ಆವರಣದ ಮೂಲೆಯೊಂದರಲ್ಲಿ ಪಾಳು ಬಿದ್ದಿದ್ದ ಜಾಗದಲ್ಲಿ ಯಕ್ಸಂಬಾದಿಂದ ಫಲವತ್ತಾದ ಮಣ್ಣು ತರಿಸಿಕೊಂಡು ಸಮತಟ್ಟಾಗಿ ಭೂಮಿಯನ್ನು ಸಿದ್ಧಪಡಿಸಿಕೊಂಡರು. ಅರಭಾವಿಯ ನರ್ಸರಿಯಿಂದ ವಿವಿಧ ಜಾತಿಯ ಆಯುರ್ವೇದದ ಸಸಿಗಳನ್ನು ಮತ್ತು ವಾಯುವಿಹಾರಕ್ಕೆ ಹೋದಾಗಲೆಲ್ಲ ರಸ್ತೆ ಪಕ್ಕಗಳಲ್ಲಿ ಸಿಗುವ ಅಮೂಲ್ಯವಾದ ಆಯುರ್ವೇದ ಔಷಧಿಯ ಗುಣವುಳ್ಳ ಸಸಿಗಳನ್ನು ತಂದು ನೆಟ್ಟು ಬೆಳೆಸಿದ್ದಾರೆ. ಈಗ ಅಲ್ಲಿ ನೂರಕ್ಕೂ ಹೆಚ್ಚು ಸಸಿಗಳು ಬೆಳೆದಿದೆ.

ಸಸ್ಯೋದ್ಯಾನ ಅಭಿವೃದ್ಧಿಪಡಿಸುವಲ್ಲಿ ಆಸ್ಪತ್ರೆಯ ಆಗಿನ ಸಿಎಂಒ ಡಾ.ಎಸ್.ಎಸ್. ಗಡೇದ ಅವರ ಸಹಕಾರವನ್ನು ಡಾ.ಕಡ್ಲೆಪ್ಪಗೋಳ ಸ್ಮರಿಸುತ್ತಾರೆ. ‘ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವ ಚಿತ್ರಕಮೂಲ, ಇನ್ಸುಲಿನ್, ಹರಿತ ಮಂಜರಿ, ಶತಾವರಿ, ನಾಗದಾಳಿ, ಕಾಕಮಾಚಿ, ಚಾಂಗೇರಿ, ಭೃಂಗರಾಜ, ಏರಂಡೆ, ಅನ್ನಪೂರ್ಣಾ, ಬೆಟ್ಟದ ನೆಲ್ಲಿ, ತುಳಸಿ, ನಿರ್ಗುಂಡಿ, ಅಮೃತಬಳ್ಳಿ, ದೊಡ್ಡಪತ್ರಿ, ಗುಲಗಂಜಿ, ಕರಿಬೇವು, ಹಿಪ್ಪಲಿ, ವಚಾ (ಬಜ್ಜೆ ಬೇರು), ರಾಸ್ನಾ, ಸದಾಪುಷ್ಪ, ಅತ್ತಿಮರ, ನುಗ್ಗೆ, ನಿಂಬೆ, ಪಪ್ಪಾಯಿ, ಗವತಿ, ಕರಂಜ, ನೇರಳೆ ಸೇರಿದಂತೆ ತರಹೇವಾರಿ ಆಯುರ್ವೇದ ಸಸ್ಯಗಳನ್ನು ಬೆಳೆಸಲಾಗಿದೆ’ ಎಂದು ಮಾಹಿತಿ ನೀಡಿದರು.

 


Spread the love

About Laxminews 24x7

Check Also

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Spread the love ಬೆಂಗಳೂರು: ಒಂದು ತಿಂಗಳಿಂದ ನಡೆಯುತ್ತಿದ್ದ ಅಬ್ಬರದ ಪ್ರಚಾರಕ್ಕೆ ಬುಧವಾರ ತೆರೆ ಬೀಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ