Home / Uncategorized / ಇಂದು ಯಾರಿಗೆ ಒಲಿಯುತ್ತಾರೆ ಅದೃಷ್ಟ ಲಕ್ಷ್ಮಿ?; ಹರಾಜಿನ ಪ್ರಮುಖ ಆಕರ್ಷಣೆಯೇ ಅರ್ಜುನ್​ ತೆಂಡುಲ್ಕರ್​

ಇಂದು ಯಾರಿಗೆ ಒಲಿಯುತ್ತಾರೆ ಅದೃಷ್ಟ ಲಕ್ಷ್ಮಿ?; ಹರಾಜಿನ ಪ್ರಮುಖ ಆಕರ್ಷಣೆಯೇ ಅರ್ಜುನ್​ ತೆಂಡುಲ್ಕರ್​

Spread the love

ಐಪಿಎಲ್​ ಸೀಸನ್​ -14ರ ಮಿನಿ ಹರಾಜಿಗೆ, ಚೆನ್ನೈನಲ್ಲಿ ವೇದಿಕೆ ಸಜ್ಜಾಗಿದೆ. ಈಗಾಗಲೇ ಹರಾಜಿಗೆ ತಯಾರಿ ನಡೆಸಿರುವ ಫ್ರಾಂಚೈಸಿಗಳು, ಕೆಲ ಸ್ಟಾರ್​​ ಆಟಗಾರರ ಜೊತೆ ಫ್ಯೂಚರ್​ ಸ್ಟಾರ್​​ಗಳಿಗೆ ಮಣೆಹಾಕುವ ಲೆಕ್ಕಚಾರದಲ್ಲಿವೆ. ಇನ್ನು ಕೆಲ ಫ್ರಾಂಚೈಸಿಗಳಂತೂ, ದೇಶಿ ಟೂರ್ನಿಗಳಲ್ಲಿ ಕಮಾಲ್​ ಮಾಡಿರುವ ಪ್ರತಿಭೆಗಳನ್ನ, ಖರೀದಿಸಲು ಪ್ಲಾನ್​ ಮಾಡಿಕೊಂಡಿವೆ.

ಅರ್ಜುನ್​ ತೆಂಡುಲ್ಕರ್​​- ಆಲ್​ರೌಂಡರ್​​
ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಪ್ರಮುಖ ಆಕರ್ಷಣೆ, ದಿಗ್ಗಜ ಸಚಿನ್​ ತೆಂಡುಲ್ಕರ್​ ಸುಪುತ್ರ ಅರ್ಜುನ್​ ತೆಂಡುಲ್ಕರ್​. ಎಡಗೈ ಪೇಸರ್​ ಮತ್ತು ಹ್ಯಾಂಡಿ ಬ್ಯಾಟ್ಸ್​ಮನ್​ ಆಗಿರುವ ಅರ್ಜುನ್​, ಇತ್ತಿಚೀಗೆ ಕ್ಲಬ್​‌ ಮಟ್ಟದ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ಆಡಿದ 2 ಪಂದ್ಯಗಳಿಂದ ಅರ್ಜುನ್​, ಬರೋಬ್ಬರಿ 13 ಸಿಕ್ಸರ್‌ಗಳನ್ನ ಸಿಡಿಸಿದ್ದಾರೆ. ಇನ್ನು ಈ ಯುವ ಆಲ್​ರೌಂಡರ್​​​ನನ್ನ ಖರೀದಿಸಲು ಮುಂಬೈ ಇಂಡಿಯನ್ಸ್​​ ಹೆಚ್ಚು ಆಸಕ್ತಿ ತೋರುತ್ತಿರೋ ಹಾಗೆ ಕಾಣುತ್ತದೆ. ಮುಂಬೈ ಮಾತ್ರವಲ್ಲದೆ, ಬಹುತೇಕ ಎಲ್ಲಾ ಫ್ರಾಂಚೈಸಿಗಳೂ ಅರ್ಜುನ್​ ಮೇಲೆ ಕಣ್ಣಿಟ್ಟಿವೆ.

ಮಹಮ್ಮದ್​ ಅಜರುದ್ದೀನ್​​- ಆರಂಭಿಕ ಬ್ಯಾಟ್ಸ್​ಮನ್​​​
ಇತ್ತೀಚಿಗೆ ಮುಕ್ತಾಯವಾದ ಸೈಯದ್​ ಮುಷ್ತಾಕ್​ ಆಲಿ ಟಿ-ಟ್ವೆಂಟಿ ಟೂರ್ನಿಯಲ್ಲಿ ಅಜರುದ್ದಿನ್, ಧೂಳೆಬ್ಬಿಸಿದ್ದರು. ಈ ಕೇರಳದ ಆರಂಭಿಕ ಬ್ಯಾಟ್ಸ್​ಮನ್​​ ತಮ್ಮ ಸ್ಪೋಟಕ ಬ್ಯಾಟಿಂಗ್​ನಿಂದಲೇ, ಐಪಿಎಲ್​ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಇನ್ನು ಅಜುರುದ್ದೀನ್​ ಬ್ಯಾಟಿಂಗ್​ ಶೈಲಿ, ಟಿ20 ಕ್ರಿಕೆಟ್​​ಗೆ ಹೇಳಿ ಮಾಡಿಸಿದಂತಿದೆ. ಮುಷ್ತಾಕ್​ ಆಲಿ ಟೂರ್ನಿಯಲ್ಲಿ ಸಿಡಿಸಿದ್ದ ಸ್ಪೋಟಕ ಶತಕವೇ, ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಕೇವಲ 37 ಎಸೆತಗಳಲ್ಲೇ ಸೆಂಚೂರಿ ಸಿಡಿಸಿದ್ದ​ ಈ ಯಂಗ್​ ಡೈನಾಮಿಕ್​ ಬ್ಯಾಟ್ಸ್​ಮನ್​​​ ಖರೀದಿಗೆ, ಫ್ರಾಂಚೈಸಿಗಳು ತುದಿಗಾಲಿನಲ್ಲಿ ನಿಂತಿವೆ.

ಉಮೇಶ್​​ ಯಾದವ್​​- ವೇಗದ ಬೌಲರ್​​​
ಐಪಿಎಲ್​​ನಲ್ಲಿ ಇದುವರೆಗೆ 3 ತಂಡಗಳನ್ನ ಪ್ರತಿನಿಧಿಸಿರುವ ವಿದರ್ಭ ಎಕ್ಸ್​ಪ್ರೆಸ್​ ಉಮೇಶ್​ ಯಾದವ್​, ಈ ಬಾರಿ ಹೊಸ ತಂಡ ಸೇರ್ಪಡೆಯ ನಿರೀಕ್ಷೆಯಲ್ಲಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ದುಬಾರಿ ಬೌಲರ್​ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಉಮೇಶ್​​, ಲೈನ್​ ಆಯಂಡ್​ ಲೆನ್ತ್​​ ಕಾಯ್ದುಕೊಳ್ಳುವಲ್ಲಿ ಎಡವುತ್ತಲೇ ಇರ್ತಾರೆ. ಜೊತೆಗೆ ಬೌಲಿಂಗ್​ನಲ್ಲೂ ಉಮೇಶ್​ ಪದೇ ಪದೇ ಕಂಟ್ರೋಲ್​ ತಪ್ಪೋದು, ವೇಗಿಯ​ ಮೈನಸ್​​ ಪಾಯಿಂಟ್​ ಆಗಿದೆ. ಒಂದು ವೇಳೆ ಉಮೇಶ್​​​ ಫಾರ್ಮ್​ನಲ್ಲಿದ್ದಿದ್ದೇ ಆದ್ರೆ, ಆ ದಿನ ಡೇಂಜರಸ್​​ ಬೌಲರ್​ ಆಗಿ ಎದುರಾಳಿ ಬ್ಯಾಟ್ಸ್​ಮನ್​ಗಳನ್ನ ಕಾಡ್ತಾರೆ.

ಕೃಷ್ಣಪ್ಪ ಗೌತಮ್​​- ಆಲ್​ರೌಂಡರ್​
ಕರ್ನಾಟಕದ ಸ್ಟಾರ್​ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​ ಮೇಲೆ, ಮಿನಿ ಹರಾಜಿನಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ. ಸದ್ಯ ಐಪಿಎಲ್​​ನಲ್ಲಿ ಆಡಿರುವವರ ಪೈಕಿ ಇವರು ಬಹುಬೇಡಿಕೆಯ ಆಟಗಾರ ಆಗಿದ್ದಾರೆ. ತನ್ನ ಆಫ್​​ ಸ್ಪಿನ್​​​ ಮೂಲಕ ಸ್ಟಾರ್​ ಬ್ಯಾಟ್ಸ್​ಮನ್​ಗಳನ್ನ ಕಾಡುವ ಗೌತಮ್​, ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್​ ನಡೆಸಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ತಾಕತ್ತು ಹೊಂದಿದ್ದಾರೆ. ಈ ಹಿಂದೆ ರಾಜಸ್ಥಾನ ರಾಯಲ್ಸ್​​ ಪರ ಆಡಿರುವ ಪಂದ್ಯಗಳೇ, ಇದಕ್ಕೆ ಉದಾಹರಣೆ. ಕಳೆದ ಬಾರಿ ಹೆಚ್ಚು ಅವಕಾಶಗಳು ಸಿಗದೆ ಬೆಂಚ್​ ಕಾದಿದ್ದ ಕೆ.ಗೌತಮ್​, ಈ ಬಾರಿ ಹೊಸ ತಂಡ ಸೇರಿ ಫೀಲ್ಡ್​ಗಿಳಿಯುವ ನಿರೀಕ್ಷೆಯಲ್ಲಿದ್ದಾರೆ.

ಶಿವಂ ದುಬೆ- ಆಲ್​ರೌಂಡರ್​​
ಚುಟುಕು ಕ್ರಿಕೆಟ್​ನಲ್ಲಿ ಆಲ್​ರೌಂಡರ್​​ಗಳಿಗೆ ಅವಕಾಶದ ಹೆಬ್ಬಾಗಿಲು ಯಾವಾಗಲೂ ತೆರದಿರುತ್ತೆ. ಮೀಡಿಯಂ ಫೇಸ್​​ ಬೌಲಿಂಗ್​ ಜೊತೆಗೆ ಹಾರ್ಡ್​ ಹಿಟ್ಟರ್​ ಆಗಿರುವ ದುಬೆ, ಮ್ಯಾಚ್​​ ವಿನ್ನಿಂಗ್​​ ಪರ್ಫಾಮೆನ್ಸ್​ ನೀಡಬಲ್ಲ ಆಟಗಾರ. ಆದರೆ ಕಳೆದ ಸೀಸನ್​ನಲ್ಲಿ ಸ್ಥಿರ ಪ್ರದರ್ಶನ ನೀಡದ ಶಿವಂ ದುಬೆಗೆ, ಈ ಬಾರಿಯ ಹರಾಜಿನಲ್ಲಿ ಬೇಡಿಕೆಯಂತೂ ಇದೆ. ಸ್ಲಾಗ್​ ಓವರ್​​ಗಳಲ್ಲಿ ಸಿಡಿಯಬಲ್ಲ ಹಾಗೂ ಬೌಲಿಂಗ್​ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿರುವ ದುಬೆ, ಯಾವ ತಂಡದ ಪಾಲಾಗ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.

ಇವರಷ್ಟೇ ಅಲ್ಲ ಇನ್ನೂ ಹಲವು ದೇಶಿ ಪ್ರತಿಭೆಗಳು ಐಪಿಎಲ್​​​ ಹರಾಜಿನಲ್ಲಿ ಬಿಗ್​ ಮೊತ್ತಕ್ಕೆ ಸೇಲ್​ ಆಗುವ ನಿರೀಕ್ಷೆಯಿದೆ. ಒಟ್ನಲ್ಲಿ ಅದೃಷ್ಟದ ಪರೀಕ್ಷೆಗೆ ನಿಂತಿರುವ ದೇಶಿ ಕ್ರಿಕೆಟಿಗರು, ಇಂದಿನ ಹರಾಜಿನಲ್ಲಿ ಕೋಟಿ ವೀರರಾಗುವ ಕನಸು ಕಾಣ್ತಿರೋದಂತೂ, ಸುಳ್ಳಲ್ಲ.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ