ರಾಜ್ಯದಲ್ಲಿ ರೇಶನ್ ಅಕ್ಕಿ ವಿತರಣೆ ಬಗ್ಗೆ ಆಹಾರ ಸಚಿವ ಉಮೇಶ ಕತ್ತಿ ಹೇಳಿದ್ದೇನು..?
ಉತ್ತರಕರ್ನಾಟಕ ಭಾಗದ ಜನರಿಗೆ ಅಕ್ಕಿ ಬದಲು ಜೋಳ ಕೊಡುತ್ತಿದ್ದೇವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ರಾಗಿ ಕೊಡುತ್ತಿದ್ದೇವೆ. ಜನರು ಅಕ್ಕಿಯನ್ನೆ ಕೊಡಿ ಎಂದು ಒತ್ತಾಯಿಸಿದ್ರೆ ಅಕ್ಕಿಯನ್ನೆ ಕೊಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತ ಮಾಡಿ ಬಡವರ ಹೊಟ್ಟೆ ಮೇಲೆ ಸರ್ಕಾರ ಹೊಡೆಯುತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯರ ಆರೋಪಕ್ಕೆ ಇದೇ ವೇಳೆ ಪ್ರತಿಕ್ರಯಿಸಿದ ಉಮೇಶ ಕತ್ತಿ ಅವರು ಕರ್ನಾಟಕ ರಾಜ್ಯದ ಜನರಿಗೆ ಉನ್ನಲು ಏನು ಬೇಕು ಅದನ್ನು ನೀಡಲು ಸರ್ಕಾರ ಚಿಂತನೆ ಮಾಡುತ್ತಿದೆ. ಅಕ್ಕಿ ಕಡಿತ ಮಾಡುತ್ತಿಲ್ಲ.
ಅಕ್ಕಿ ಬದಲಾಗಿ ಈ ಭಾಗದಲ್ಲಿ ಜೋಳ ಕೊಡುತ್ತಿದ್ದೇವೆ.