ದೆಹಲಿ ಸಂಯುಕ್ತ ಕಿಸಾನ ಮೋರ್ಚ
ಸಂದೇಶ
ಆತ್ಮೀಯ ರೈತ ಮುಖಂಡರೇ,
ರೈತ, ದಲಿತ,ಕಾರ್ಮಿಕ, ಐಕ್ಯ ಹೋರಾಟದ ಸಂದೇಶ* ರಾಜ್ಯ ಜಿಲ್ಲಾ, ತಾಲೂಕು, ಗ್ರಾಮ ಘಟಕ ಪದಾಧಿಕಾರಿಗಳೇ* ,
ದಿಲ್ಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ, ರೈತರ ಬೇಡಿಕೆಗಳನ್ನು ಈಡೇರಿಸಲು ಮತ್ತು ಹೋರಾಟ ನಿರತ ರೈತರ ಮೇಲಿನ ದೌರ್ಜನ್ಯ ಖಂಡಿಸುತ್ತಾ ದೆಹಲಿಯ ಸಂಯುಕ್ತ ಕಿಸಾನ ಮೋರ್ಚಾ ಕರೆ ಮೇರೆಗೆ ದಿನಾಂಕ ಪೆಬ್ರುವರಿ 6, ರಂದು 12 ಗಂಟೆಯಿಂದ 2ಗಂಟೆ ತನಕ ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ಕೃಷಿಕ ಸಮಾಜ (ಸಂ) ರೈತ ಸಂಘಟನೆ ನೇತೃತ್ವದಲ್ಲಿ ರಸ್ತೆ ಬಂದ್ ಆಚರಿಸಿ ರೈತರ ಚಳುವಳಿ ಮತ್ತು ರೈತರ ಶಕ್ತಿಯನ್ನು ಸರ್ಕಾರಕ್ಕೆ ತೋರಿಸಬೇಕು ರೈತ – ದಲಿತ ಕಾರ್ಮಿಕ ಐಕ್ಯ* ಹೋರಾಟದ ಸಹಕಾರದೊಂದಿಗೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಸಮಸ್ತ ರೈತರು,ದಲಿತ,ಕಾರ್ಮಿಕ,ವಿದ್ಯಾರ್ಥಿ, ಯುಜನ,ಮಹಿಳಾ, ಸಂಘಟನೆ ಗಳು, ಕನ್ನಡ ಪರ ಸಂಘಟನೆ ಗಳು, ರೈತಪರ – ಸಮಾಜಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗೊಳಿಸಲು ಕೋರುತ್ತೇನೆ
ತಮ್ಮ ವಿಶ್ವಾಸಿ
ಸಿದಗೌಡ ಮೋದಗಿ, ರಾಜ್ಯಾಧ್ಯಕ್ಷರು
ಭಾ,ಕೃ,ಸ (ಸಂ) ರೈತ ಸಂಘಟನೆ, ಕರ್ನಾಟಕ.ಬೆಳಗಾವಿ.