ಕೋಲಾರ (ಜ. 31): ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಲ್ಲೆಂಗುರ್ಕಿ ರೈಲ್ವೆ ಅಂಡರ್ ಪಾಸ್ ಬಳಿ ಕಳೆದ ಜ. 23 ರಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ತಮ್ಮನ್ನೇ ಅಣ್ಣನನ್ನು ಕೊಲೆ ಮಾಡಿರುವುದು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಬಂಗಾರಪೇಟೆ ನಿವಾಸಿ ರಮೇಶ್ ಕೊಲೆಯಾಗಿದ್ದು, ಆತನ ತಮ್ಮ ರಾಜೇಶ್ ಈ ಕೃತ್ಯ ಎಸಗಿದವನು. ಮಕ್ಕಳನ್ನು ದತ್ತು ನೀಡದ ಹಿನ್ನಲೆ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಯಲಾಗಿದೆ. ನಿನ್ನ ಮಕ್ಕಳನ್ನು ನೋಡಿಕೊಳ್ಳುತ್ತೇನೆ ದತ್ತು ನೀಡುವಂತೆ ಅಣ್ಣ ರಮೇಶ್ನಿಗೆ ತಮ್ಮ ರಾಜೇಶ್ ಕೇಳಿದ್ದಾನೆ. ಇದಕ್ಕೆ ರಮೇಶ ಒಪ್ಪದೇ ಮಾತಿಗೆ ಮಾತು ಬೆಳೆದಿದೆ. ಈ ಹಿನ್ನಲೆ ಕುಪಿತನಾಗಿ ಹತ್ಯೆ ಮಾಡಿರುವುದಾಗಿ ರಾಜೇಶ್ ಪೊಲೀಸರ ಮುಂದೆ ತಿಳಿಸಿದ್ದಾನೆ.
Check Also
ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!
Spread the love ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು …