Breaking News
Home / ಜಿಲ್ಲೆ / ಬೆಂಗಳೂರು / ಏನಪ್ಪಾ, ಮೊದಲೇ ಬಂದು ಚೇರ್ ರಿಸರ್ವ್ ಮಾಡ್ಕೊಂಡಿದ್ದೀಯಾ ಎಂದು ಯತ್ನಾಳ್​ಗೆ ಕಿಚಾಯಿಸಿದರು ಬೊಮ್ಮಾಯಿ

ಏನಪ್ಪಾ, ಮೊದಲೇ ಬಂದು ಚೇರ್ ರಿಸರ್ವ್ ಮಾಡ್ಕೊಂಡಿದ್ದೀಯಾ ಎಂದು ಯತ್ನಾಳ್​ಗೆ ಕಿಚಾಯಿಸಿದರು ಬೊಮ್ಮಾಯಿ

Spread the love

 ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಇಂದು ಬಿಜೆಪಿ‌ ಶಾಸಕರ ಜೊತೆ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರ ಜೊತೆ ಸಿಎಂ ಬಿ.ಎಸ್​. ಯಡಿಯೂರಪ್ಪ ಚರ್ಚೆ ನಡೆಸಿದರು. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ 35 ಶಾಸಕರ ಜೊತೆ ನಗರದ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿದರು. ತಮ್ಮ ಕ್ಷೇತ್ರಗಳಲ್ಲಿ ಶಾಸಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅನುದಾನದ ಬಗ್ಗೆ ಚರ್ಚೆ ಸಹ ನಡೆಸಿದರು.

ಈ ವೇಳೆ, ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ವಲಯವಾರು ಸಭೆಗೆ ಆಗಮಿಸಿದ್ದರು. ಸಭೆಯಲ್ಲಿ ಎಲ್ಲರಿಗಿಂತ ಮೊದಲೇ ಹಾಜರಾಗಿದ್ದ ಯತ್ನಾಳ್ ಮೊದಲ ಸಾಲಿನಲ್ಲಿ ಕುಳಿತರು
 ತದ ನಂತರ ಸಭೆಗೆ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದನ್ನು ಗಮನಿಸಿ ಏನಪ್ಪಾ, ಮೊದಲೇ ಬಂದು ಚೇರ್ ರಿಸರ್ವ್ ಮಾಡ್ಕೊಂಡಿದ್ದೀಯಾ ಎಂದು ಯತ್ನಾಳ್​ಗೆ ಕಿಚಾಯಿಸಿದರು. ಇದಕ್ಕೆ ಶಾಸಕ ಯತ್ನಾಳ್..​ ಹೌದು ಅಂತಾ ನಗುತ್ತಲೇ ಉತ್ತರಿಸಿದರು. ಇಬ್ಬರ ಸಂಭಾಷಣೆ ಗಮನಿಸಿದ ಇತರ ಶಾಸಕರು ಈ ವೇಳೆ ಯತ್ನಾಳ್​ರನ್ನು ಸುತ್ತುವರಿದು ಮಾತನಾಡಿಸಿದರು


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ