ಬೆಳಗಾವಿ: ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಅಮೃತಹಸ್ತದಿಂದ ಕಿತ್ತೂರಿನಲ್ಲಿ ಉದ್ಘಾಟನೆಗೊಂಡ “ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ”ಕ್ಕೆ ಈಗ 58ರ ಸಂಭ್ರಮ. ಕಿತ್ತೂರು ಕೋಟೆಗೆ ಬರುವವರು ಈ ವಸ್ತು ಸಂಗ್ರಹಾಲಯ ಕಣ್ತುಂಬಿಕೊಳ್ಳುತ್ತಾರೆ. ಕಳೆದ ಎರಡು ವರ್ಷಗಳಲ್ಲಿ 1.72 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಪ್ರವಾಸಿಗರಿಂದ 17 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಏನೇನಿದೆ? ಇನ್ನೂ ಏನಾಗಬೇಕಿದೆ? ಎಂಬ ಕುರಿತು ಇಲ್ಲಿದೆ ವಿಶೇಷ ವರದಿ.
![]()
ಕಿತ್ತೂರಿನ ಕೋಟೆ ಆವರಣದಲ್ಲಿ ನಿರ್ಮಿಸಿರುವ “ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ” ಕಿತ್ತೂರು ಸಂಸ್ಥಾನದ ಗತವೈಭವವನ್ನು ಹಿಡಿದಿಟ್ಟುಕೊಂಡಿದೆ. 1967 ಜನವರಿ 10ರಂದು ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರೇ ಸ್ವತಃ ಕಿತ್ತೂರಿಗೆ ಆಗಮಿಸಿ ಲೋಕಾರ್ಪಣೆಗೊಳಿಸಿರುವ ಈ ವಸ್ತು ಸಂಗ್ರಹಾಲಯವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ವಹಣೆ ಮಾಡುತ್ತಿದೆ.![]()
ಈ ಮೊದಲು ಸಂಗ್ರಹಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ಶುಲ್ಕ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಮಕ್ಕಳಿಗೆ 5 ರೂ., ವಯಸ್ಕರಿಗೆ 10 ರೂ. ಇರುತ್ತದೆ. 2023 ಆಗಸ್ಟ್ 3ರಿಂದ 2025 ಆಗಸ್ಟ್ 31ರವರೆಗೆ ಒಟ್ಟು 1,72,223 ಪ್ರವಾಸಿಗರು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರವೇಶ ಶುಲ್ಕದಿಂದ ಬರೊಬ್ಬರಿ 17,33,855 ರೂ.ಸಂಗ್ರಹವಾಗಿದೆ.
Laxmi News 24×7