ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ “ಯಾರು ಕಿಂಗ್?” ಎಂಬ ಪ್ರಶ್ನೆಗೆ ಮತ್ತೆ ಒಂದೇ ಉತ್ತರ ಸಿಕ್ಕಿದೆ — ಜಾರಕಿಹೊಳಿ ಕುಟುಂಬವೇ ಕಿಂಗ್ಮೇಕರ್!
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಪ್ಯಾನೆಲ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ, ತಮ್ಮ ಪ್ರಭಾವವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಅಣ್ಣಾಸಾಹೇಬ್ ಜೊಲ್ಲೆ, ಹಾಗೂ ಲಖನ ಜಾರಕಿಹೊಳಿ ಅವರ ತಂತ್ರಜ್ಞಾನದ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ಜಾರಕಿಹೊಳಿ ಶಕ್ತಿ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
ಜನಪ್ರಿಯ ಮಾತು ಹೀಗಿದೆ —
“ಮೀನಿನ ಹೆಜ್ಜೆ ಕಂಡುಹಿಡಿಯಬಹುದು, ಆದರೆ ಜಾರಕಿಹೊಳಿ ಸಾಹುಕಾರರ ರಾಜಕೀಯ ರಣತಂತ್ರ ಕಂಡುಹಿಡಿಯಲು ಸಾಧ್ಯವಿಲ್ಲ!”
ರಾಜಕೀಯದಲ್ಲಿ ಬದಲಾಗುವ ಗಾಳಿಯ ದಿಕ್ಕನ್ನು ಮುಂಚಿತವಾಗಿ ಓದಿಕೊಳ್ಳುವ ಜಾರಕಿಹೊಳಿ ಕುಟುಂಬ, ಮತ್ತೊಮ್ಮೆ ತಮ್ಮ ಬುದ್ಧಿ, ಬಲ ಮತ್ತು ಬಲಿಷ್ಠ ಸಂಘಟನೆಯಿಂದ ಬೆಳಗಾವಿಯ ರಾಜಕೀಯದ ಪಟಳದಲ್ಲಿ ತಮ್ಮದೇ ಗುರುತು ಮೂಡಿಸಿದ್ದಾರೆ.
#SatishJarkiholi #ನಮ್ಮಸಾಹುಕಾರನಮ್ಮಹೆಮ್ಮೆ
Laxmi News 24×7