“ಆರೋಗ್ಯವೇ ಭಾಗ್ಯ – ಜನಸೇವೆಯೇ ಜನಾರ್ದನ ಸೇವೆ”
ನಿಪ್ಪಾಣಿ ಕ್ಷೇತ್ರದ ಕಾರದಗಾ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷ ಗ್ರಾಮೀಣ ಮಂಡಲ ವತಿಯಿಂದ ಜಗತ್ತು ಕಂಡ ಅಪ್ರತಿಮ ನಾಯಕರಾದ ಸನ್ಮಾನ್ಯ ಪ್ರಧಾ ನಮಂತ್ರಿಗಳಾದ ಶ್ರೀ Narendra Modi ಜಿ ಅವರ ಜನ್ಮದಿನದ ಅಂಗವಾಗಿ “ಸೇವಾಪಾಕ್ಷಿಕ” ಅಭಿಯಾನದಡಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ,ಚಾಲನೆ ನೀಡಿ, ಮಾತನಾಡಲಾಯಿತು.
ಆರೋಗ್ಯದ ಕುರಿತಂತೆ ಜಾಗೃತಿ ಮೂಡಿಸುವ ಜೊತೆಗೆ ಪ್ರಧಾನಮಂತ್ರಿಗಳ ಸೇವಾ ಮನೋಭಾವನೆ ಮತ್ತು ಬದ್ಧತೆಯನ್ನು ಸ್ಮರಿಸಲಾಯಿತು.ಮೋದಿ ಜಿ ಅವರ ಹುಟ್ಟು ಹಬ್ಬಕ್ಕೆ ಮಂಡಲ ಸದಸ್ಯರು ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದ ಕಾರ್ಯ ನಿಜಕ್ಕೂ ಶ್ಲಾಘನೀಯ.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕರು,ಮಂಡಲ ಸದಸ್ಯರು, ಬೂತ್ ಸದಸ್ಯರು,ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Laxmi News 24×7