ಮಂಗಳೂರು: ರಾತ್ರಿ ಕುಟುಂಬದ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಯುವಕನ ತಲ್ವಾರ್ ನಿಂದ ದಾಳಿ ನಡೆಸಿರುವ ಘಟನೆ ಮಂಗಳೂರಿನ ಫಳ್ನೀರ್ ಬಳಿ ನಡೆದಿದೆ.
30 ವರ್ಷದ ನೌಷಾದ್ ಹಲ್ಲೆಗೊಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಕದ್ರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನವೆಂಬರ್ 15ರಂದು ಗುರುಪುರದ ಕೈಕಂಬ ಬಳಿಯ ಕಂದಾವರ ಮಸೀದಿ ಹತ್ತಿರ ಅಬ್ದುಲ್ ಅಜೀಜ್ ಎಂಬವರ ಕೊಲೆಗೆ ಯತ್ನ ನಡೆದಿತ್ತು. ಮಸೀದಿಯ ಕಮಿಟಿ ವಿಚಾರದ ಹಿನ್ನೆಲೆ ಮೂವರು ಯುವಕರು ಅಬ್ದುಲ್ ಅಜೀಜ್ ಮೇಲೆ ಕೊಲೆ ಯತ್ನ ನಡೆದಿತ್ತು. ಇದೀಗ ಅಬ್ದುಲ್ ಅಜೀಜ್ ಅವರ ಮಗಳ ಪತಿಯಾಗಿರುವ ನೌಷಾದ್ ಮೇಲೆ ದುಷ್ಕರ್ಮಿಗಳು ತಲ್ವಾರ್ ಬೀಸಿದ್ದಾರೆ.