ಬೆಂಗಳೂರು : ಅಶ್ಲೀಲ ವೀಡಿಯೋ ವಿಚಾರವಾಗಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಧ್ಯ ಪ್ರತ್ಯಕ್ಷವಾಗಿದ್ದು, ಬರುವ ಮೇ. 31 ರಂದು ಎಸ್ಐಟಿ ಮುಂದೆ ಹಾಜರಾಗುವೆ ಎಂದು ಹೇಳಿದ್ದಾರೆ.
ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ. ಪೂರ್ವ ನಿಗದಿತ ಪ್ರವಾಸದ ಹಿನ್ನಲೆಯಲ್ಲಿ ನಾನು ಚುನಾವಣೆ ನಂತರ ವಿದೇಶಿ ಪ್ರವಾಸಕ್ಕೆ ಹೊರಟಿದ್ದೆ. ಇದಾದ ನಂತರ ನಾಲ್ಕು ದಿನಗಳಾದ ಮೇಲೆ ನನ್ನ ಮೇಲೆ ಪ್ರಕರಣ ದಾಖಲಾಗಿದ್ದು ತಿಳಿದುಬಂದಿದೆ.
![ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ ; ಮೇ. 31 ಕ್ಕೆ ಎಸ್ಐಟಿ ಮುಂದೆ ಹಾಜರಾಗುವ ನಿರ್ಧಾರ](https://belagavivoice.com/wp-content/uploads/2024/05/images-78.jpeg)
ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗಿದೆ. ನನ್ನ ವಿರುದ್ಧ ದಾಖಲಾಗಿದ್ದು ಎಲ್ಲಾ ಸುಳ್ಳು ಪ್ರಕರಣದ ಕುರಿತು ನ್ಯಾಯಾಲಯದಿಂದಲೇ ಹೊರಬರುವೆ. ಕಾನೂನಿಗೆ ಗೌರವ ನೀಡುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕಾನೂನು ಕ್ರಮ ಎದುರಿಸಲಿದ್ದೇನೆ. ನನ್ನ ತಂದೆ – ತಾಯಿ ಹಾಗೂ ತಾತನ ಕ್ಷಮೆ ಕೇಳುತ್ತೇನೆ.ಹಾಗೆಯೇ ಪಕ್ಷದ ಕಾರ್ಯಕರ್ತರ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.