ಬೆಂಗಳೂರು: ಟ್ರಯಲ್ ನೋಡುತ್ತೇನೆ ಎಂದು 40 ಗ್ರಾಮ್ನ ಚಿನ್ನದ ಸರವನ್ನು ಕೊರಳಿಗೆ ಹಾಕಿಕೊಂಡು ನಂತರ ಗೆಳೆಯ ಜೊತೆ ಯುವತಿಯೊಬ್ಬಳು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಮುರುಗೇಶ್ ಪಾಳ್ಯದ ನವರತ್ನ ಜ್ಯುವೆಲ್ಲರ್ಸ್ ನಲ್ಲಿ ನಡೆದಿದೆ.ಚಿನ್ನ ಖರೀದಿಸುವ ನೆಪದಲ್ಲಿ ಜೋಡಿಯೊಂದು ನವರತ್ನ ಜ್ಯುವೆಲ್ಲರ್ಸ್ ಗೆ ಬಂದಿದೆ. ಈ ವೇಳೆ ಸರವನ್ನು ಟ್ರಯಲ್ ನೋಡುತ್ತೇವೆ ಎಂದು ಯುವತಿ ಕೊರಳಿಗೆ ಹಾಕಿಕೊಂಡಿದ್ದಾಳೆ. ನಂತರ ಎಟಿಎಂ ಕಾರ್ಡ್ ಪಡೆದುಕೊಳ್ಳುವ ನೆಪದಲ್ಲಿ ಅಂಗಡಿಯಿಂದ ಹೊರ ಬಂದು ಗೆಳೆಯನ ಜೊತೆ ಎಸ್ಕೇಪ್ ಆಗಿದ್ದಾಳೆ. ಈ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Laxmi News 24×7