Home / ರಾಜಕೀಯ / ಶಕ್ತಿ ಪ್ರದರ್ಶನ ಮಾಡಿದ ಮೃಣಾಲ್‌ ಹೆಬ್ಬಾಳಕರ

ಶಕ್ತಿ ಪ್ರದರ್ಶನ ಮಾಡಿದ ಮೃಣಾಲ್‌ ಹೆಬ್ಬಾಳಕರ

Spread the love

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಸೋಮವಾರ, ತಮ್ಮ ಉಮೇದುವಾರಿಕೆ ಸಲ್ಲಿಸಿದರು. ನಂತರ ನಡೆದ ಅದ್ಧೂರಿ ವಿಜಯ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೆ ಸೇರಿ ಶಕ್ತಿ ಪ್ರದರ್ಶನ ಮಾಡಿದರು.

ಇಲ್ಲಿನ ಸಿ.ಪಿ.ಇಡಿ ಮೈದಾನದಿಂದ ತೆರೆದ ಜೀಪ್‌ನಲ್ಲಿ ಆರಂಭವಾದ ಮೆರವಣಿಗೆ ರಾಣಿ ಚನ್ನಮ್ಮ ವೃತ್ತದವರೆಗೂ ನಡೆಯಿತು.

ಕ್ಷೇತ್ರದ ಮೂಲೆಮೂಲೆಯಿಂದ ಬಂದು ಸೇರಿದ ಅಪಾರ ಸಂಖ್ಯೆಯ ಕಾರ್ಯಕರ್ತರು ಉರಿಬಿಸಿಲು ಲೆಕ್ಕಿಸದೇ ಮೆರವಣಿಗೆಯಲ್ಲಿ ಸಾಗಿದರು.

ಅಭ್ಯರ್ಥಿ ಮೃಣಾಲ್‌ ಜೀಪ್‌ ಏರುತ್ತಿದ್ದಂತೆ ಅಭಿಮಾನಿಗಳು ಕೂಗಾಟ, ಚೀರಾಟ ಆರಂಭಿಸಿದರು. ಡಿ.ಕೆ.ಶಿವಕುಮಾರ್‌ ವಾಹನ ಏರಿ ಕಾರ್ಯಕರ್ತರತ್ತ ಕೈಬೀಸಿ ಹುಮ್ಮಸ್ಸು ತುಂಬಿದರು. ಜೈಕಾರಗಳು ನಿರಂತರ ಮೊಳಗಿದವು. ದೇಶಭಕ್ತಿಗೀತೆ ಮೊಳಗಿಸಿದ ಬಳಕ ಮೆರವಣಿಗೆ ಆರಂಭವಾಯಿತು.

ನಾಮಪತ್ರ ಸಲ್ಲಿಕೆ: ಶಕ್ತಿ ಪ್ರದರ್ಶನ ಮಾಡಿದ ಮೃಣಾಲ್‌ ಹೆಬ್ಬಾಳಕರ

ರಾರಾಜಿಸಿದ ಧ್ವಜಗಳು: ಅಪಾರ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಕಾಂಗ್ರೆಸ್‌ ಧ್ವಜ ಹಿಡಿದು ಸಾಗಿದರು. ಮರಾಠಾ ಸಮುದಾಯದ ಹಲವು ಮುಖಂಡರು, ಯುವಕರು ಕೂಡ ಭಗವಾಧ್ವಜಗಳನ್ನು, ವಿವಿಧ ಸಮುದಾಯಗಳ ಯುವಕರು ನೀಲಿ ಬಣ್ಣ, ಹಳದಿ ಬಣ್ಣದ ಧ್ವಜಗಳನ್ನೂ ಪ್ರದರ್ಶಿಸಿದರು.

ಡೊಳ್ಳಿನ ಸಂಘ, ಡೋಲ್‌ ತಾಸೆ, ಚೆಂಡೆ ಮೇಳ ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ಕಳೆ ತಂದವು. ಯುವಕರು, ಮಹಿಳೆಯರು ಕೂಡ ಮಾರ್ಗಮಧ್ಯದ ವೃತ್ತಗಳಲ್ಲಿ ಕುಣಿದು ಕುಪ್ಪಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಆಸೀಫ್‌ ಸೇಠ್‌, ಲಕ್ಷ್ಮಣ, ಸವದಿ, ರಾಜು ಕಾಗೆ, ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ ಪಾಟೀಲ, ಮಹಾರಾಷ್ಟ್ರದ ಶಾಸಕ ಧೀರಜ್‌ ದೇಶಮುಖ, ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡರು.

 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ