ಸವದತ್ತಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಒಟ್ಟು 27 ವಾರ್ಡ್ಗಳ ಪೈಕಿ ಐದು ವಾರ್ಡ್ಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ. ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪಟ್ಟಣದ ಇತರ ವಾರ್ಡ್ಗಳಿಗೂ ಬವಣೆ ತಪ್ಪಿದ್ದಲ್ಲ ಎಂಬುದು ನಾಗರಿಕರ ಗೋಳು.
ಪಟ್ಟಣದ ಮಗ್ಗುಲಲ್ಲೇ ಮಲಪ್ರಭೆ ಹರಿಯುತ್ತಾಳೆ, ನವಿಲುತೀರ್ಥ ಜಲಾಶಯ ಇದೆ ಎಂಬ ಭರವಸೆ ಜನರಿಗೆ ಇದೆ. ಆದರೆ, ಜಲಾಶಯದಲ್ಲೂ ನೀರಿನ ಪ್ರಮಾಣ ದಿನೇದಿನೇ ಕ್ಷೀಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
20 ಬಡಾವಣೆಗಳಲ್ಲಿ ಆದ್ಯತೆ ನೋಡಿಕೊಂಡು ನೀರು ಪೂರೈಸಲಾಗುತ್ತಿದೆ. ಮಲಪ್ರಭೆಯಲ್ಲಿ ನೀರು ಇನ್ನೂ ಇರುವ ಕಾರಣ ಸದ್ಯಕ್ಕೆ ಪರದಾಡುವ ಸ್ಥಿತಿ ಇಲ್ಲ. ಆದರೆ, ಬವಣೆ ಇದೆ. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು ಎನ್ನುವುದು ಜನರ ಆಗ್ರಹ.
ಪುರಸಭೆ ವ್ಯಾಪ್ತಿಯ 62 ಬೋರ್ವೆಲ್ಗಳ ಪೈಕಿ 58ರಲ್ಲಿ ನೀರಿದೆ. ಜಾಕ್ವೆಲ್ ಹಾಗೂ ಬೋರ್ವೆಲ್ಗಳಿಂದ ನೀರು ಪೂರೈಕೆ ನಡೆದಿದೆ. ಏಪ್ರಿಲ್ನಲ್ಲಿ ಸಂಕಷ್ಟ ಎದುರಾದರೆ ಟ್ಯಾಂಕರ್ ಮೂಲಕವೂ ನೀರು ಪೂರೈಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.