ನವದೆಹಲಿ : ಐಪಿಎಲ್ 2024ರ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಹೊಸ ನಾಯಕನನ್ನ ಘೋಷಿಸಿದ್ದು, ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ
. ಎಂಎಸ್ ಧೋನಿ ಇದ್ದಕ್ಕಿದ್ದಂತೆ ನಾಯಕತ್ವವನ್ನ ತೊರೆದಿದ್ದು, ಈಗ ಋತುರಾಜ್ ಗಾಯಕ್ವಾಡ್ ಅವರನ್ನ ಚೆನ್ನೈ ತಂಡದ ಹೊಸ ನಾಯಕನನ್ನಾಗಿ ಮಾಡಲಾಗಿದೆ.
ಧೋನಿ ಕಳೆದ ಋತುವಿನಲ್ಲಿ ಚೆನ್ನೈ ಪರ ಐದನೇ ಬಾರಿಗೆ ಐಪಿಎಲ್ ಗೆದ್ದಿದ್ದರು ಮತ್ತು ಈಗ ಅವರು ತಂಡದ ಕಮಾಂಡ್’ನ್ನ ಗಾಯಕ್ವಾಡ್’ಗೆ ಹಸ್ತಾಂತರಿಸಿದ್ದಾರೆ.