ಬೆಂಗಳೂರು, ಮಾ.08: ಪ್ರಿಯತಮೆ ಬಿಟ್ಟು ಹೋಗಿದ್ದಕ್ಕೆ ನೊಂದ ಪ್ರಿಯಕರನೊಬ್ಬ ಚೂಪಾದ ಆಯುಧದಿಂದ ಹೊಟ್ಟೆಗೆ ತಿವಿದುಕೊಂಡು ಸಾವನ್ನಪ್ಪಿರುವ ಬೆಂಗಳೂರು ನಗರದ ನಡೆದಿದೆ. ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿ. ಇಬ್ಬರು ಕಾಲೇಜಿನಲ್ಲಿ ಓದುವ ವೇಳೆ ಪರಿಚಯವಾಗಿ ಲವ್ ಆಗಿತ್ತು. ಎರಡು ವರ್ಷದಿಂದ ಚೇತನ್ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು. ಈ ಹಿನ್ನಲೆ ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ.
ಬೇರೆ ಹುಡುಗಿ ಮದುವೆಯಾಗುವಂತೆ ಹೇಳಿದ ಪ್ರಿಯತಮೆ
ಇದಾದ ಬಳಿಕವೂ ಹಲವು ಬಾರಿ ಇಬ್ಬರು ಭೇಟಿಯಾಗಿ ಓಡಾಡಿದ್ದರು. ಮೊನ್ನೆಯಷ್ಟೇ ನಮ್ಮ ಚಿಕ್ಕಪ್ಪ ಮದುವೆಗೆ ಒಪ್ಪುತ್ತಿಲ್ಲ, ಹೀಗಾಗಿ ನೀನು ಬೇರೆ ಹುಡುಗಿ ಮದುವೆಯಾಗುವಂತೆ ಪ್ರಿಯತಮೆ ಜನನಿ ಹೇಳಿದ್ದಾಳೆ. ತಾನು ಇಷ್ಟಪಟ್ಟ ಹುಡುಗಿ ದೂರವಾಗಿದಕ್ಕೆ ಮನನೊಂದಿದ್ದ ಚೇತನ್, ನಿನ್ನೆ(ಮಾ.07) ರಾತ್ರಿ 11 ಗಂಟೆಗೆ ಹುಡುಗಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಜನನಿ ಸಿಗದಿದ್ರೆ, ಸಾಯುವುದಾಗಿ ಹೇಳಿದ್ದಾನೆ. ಬಳಿಕ ಜನನಿ ಕಡೆಯವರು ಚೇತನ್ ತಂದೆ-ತಾಯಿಗೆ ವಿಷಯ ತಿಳಿಸಿದ್ದಾರೆ.