ಕಲಬುರಗಿ, ಮಾರ್ಚ್ 08: ಶಿವರಾತ್ರಿ ಸೇರಿದಂತೆ ಇನ್ನಿತರ ಹಬ್ಬಗಳು ಬಂದರೆ ದೇವಸ್ಥಾನಗಳಿಗೆ ಬಿಲ್ವಪತ್ರೆ ಮತ್ತು ಹೂವು ಬರುತ್ತವೆ. ಆದರೆ ನನಗೆ ಪೊಲೀಸರಿಂದ ನೋಟಿಸ್ ಬರುತ್ತದೆ ಎಂದು ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತನಾಡಿದ ಅವರು, ಹಿಂದೂತ್ವದ ಸೂನಾಮಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎದ್ದಿದೆ. ಹಿಂದೂ ಧರ್ಮದ ಉಳಿವಿಗಾಗಿ ನಾವು ಹೋರಾಟ ಆರಂಭಿಸಿದ್ದೇವೆ. ಹಿಂದೂತ್ವದ ಗೆಲುವು ಬಿಜೆಪಿ ಹಿರಿಯ ನಾಯಕರಿಗೆ ಅರ್ಪಿಸುತ್ತೇವೆ.
2022 ರಲ್ಲಿ ಆಳಂದದಲ್ಲಿ ದೊಡ್ಡಮಟ್ಟದ ದಂಗಲ್ ಎಬ್ಬಿಸಲಾಗಿತ್ತು. ನಮ್ಮ ಮೇಲೆ ದಾಳಿ ಮಾಡಲು ಬಾಬರನ ಮೊಮ್ಮಕ್ಕಳು ಹೊಂಚು ಹಾಕಿದ್ದರು. 100 ಜನರಿಗೆ ಪೂಜೆ ಮಾಡಲು ವಕ್ಫ್ ಬೋರ್ಡ್ ಗೆ ಅರ್ಜಿ ಸಲ್ಲಿಸಿದ್ದೆವು ಎಂದು ಹೇಳಿದ್ದಾರೆ.ಆಳಂದ ಪಟ್ಟಣದ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿದ್ದೆವು. ಆದರೆ ನಮ್ಮ ಮನವಿಯನ್ನ ವಕ್ಫ್ ಬೋರ್ಡ್ ತಿರಿಸ್ಕರಿಸಿತ್ತು. ಆದರೆ ಕಲಬುರಗಿ ಹೈಕೋರ್ಟ್ ಪೀಠ 15 ಜನರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು. ಭಾರತ ಮಾತೆ ಜನ್ಮಕೊಟ್ಟಂತಹ ಈ ರಕ್ತ ಯಾರಿಗೂ ಹೆದರಲ್ಲ ಎಂದು ಕಿಡಿಕಾರಿದ್ದಾರೆ.