ಚಲಿಸುತ್ತಿರುವ ರೈಲಿನಿಂದ ಜಿಗಿದ ಯುವಕ!! ಸ್ಥಿತಿ ಗಂಭೀರ!!!
ಘಟಪ್ರಭಾ : ಚಲಿಸುತ್ತಿರುವ ರೈಲಿನಿಂದ ಜಿಗಿದ ಯುವಕನ ಸ್ಥಿತಿ ಗಂಭೀರ ವಾಗಿದ ಘಟನೆ ಘಟಪ್ರಭಾ ರೈಲು ನಿಲ್ದಾಣದ ಮೊದಲನೆಯ ಗೆಟ್ ಹತ್ತಿರ ಸಂಭವಿಸಿದೆ.
ಹೌದು ಬೆಳಗಾವಿ ಇಂದ ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲಿನಲ್ಲಿ ಘಟಪ್ರಭಾ ಕ್ಕೆ ಹೊರಟಿದ್ದ ಪಾಮಲದಿನ್ನಿ ಗ್ರಾಮದ ಯುವಕ ವಿಠ್ಠಲ್ ಗುಜನಟ್ಟಿ (18) ಎಂಬ ಯುವಕ ರೈಲಿನಲ್ಲಿ ನಿದ್ದೆಗೆ ಜಾರಿದ್ದು ಕಣ್ಣು ತೆಗೆಯುವಷ್ಟರಲ್ಲಿ ಘಟಪ್ರಭಾ ರೈಲುನಿಲ್ದಾಣ ದಿಂದ ಮುಂದೆ ಇರುವ ರೈಲ್ ಗೇಟ್ ಹತ್ತಿರ ಹೋದಾಗ ಯುವಕ ರೈಲಿನಿಂದ ಜಿಗಿದಿದ್ದಾನೆ.
ರೈಲಿನಿಂದ ಜಿಗಿದ ಯುವಕನ ಪ್ರಜ್ಞಾ ಹೀನ ವಾಗಿದ್ದು, ಯುವಕನ ಸ್ಥಿತಿ ಗಂಭೀರ ವಾಗಿದೆ. ಸ್ಥಳೀಯರು ಹಾಗೂ ಕುಟುಂಬಸ್ಥರು ಕೊಡಲೇ 108 ಆಂಬುಲೆನ್ಸ್ ಗೆ ಕರೆ ಮಾಡಿ ಆಂಬುಲೆನ್ಸ್ ನಲ್ಲಿ ಈ ಎಂ ಟಿ ಪರಮಾನಂದ ಹಾಗೂ ವಿಠ್ಠಲ್ ಪ್ರಥಮ ಚಿಕೆತ್ಸೆ ನೀಡಿ ಗೋಕಾಕ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ .
ಈ ಕುರಿತು ರೈಲ್ವೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ವನ್ನು ದಾಖಲಿಸಿಕೊಂಡಿದ್ದಾರೆ