- : ನೋಟ್ ಬ್ಯಾನ್ನಿಂದ ಆದ ಒಂದೇ ಒಂದು ಪ್ರಯೋಜವಿದ್ದರೆ ಬಿಜೆಪಿ ಉತ್ತರಿಸಲಿ ಎಂದು ಕಾಂಗ್ರೇಸ್ ನೋಟ್ ಬ್ಯಾನ್ ವಿರುದ್ಧ ಸವಾಲು ಹಾಕಿದೆ.
ಈ ಕುರಿತು ಎಕ್ಸ್ನಲ್ಲಿ ಬರೆದ ಹಂಚಿಕೊಂಡ ಕಾಂಗ್ರೇಸ್, ೨೦೧೬ ರ ಇದೇ ದಿನ ರಾತ್ರಿ ಎಂಟು ಗಂಟೆಗೆ ಭಾರತದ ಆರ್ಥಿಕತೆಗೆ, ಜನರ ಬದುಕಿಗೆ ಕೊಡಲಿ ಪೆಟ್ಟು ನೀಡಿದ ಘೋರ ದುರಂತ ಜರುಗಿತ್ತು ಎಂದು ಕಿಡಿಕಾರಿದ್ದಾರೆ.
ನೋಟ್ ಬ್ಯಾನ್ ಆಗಿ ೬ ವರ್ಷ ಪೂರೈಸಿದೆ, ಬಿಜೆಪಿಯಾಗಲಿ, ಮೊದಿಯಾಗಲಿ ತಮ್ಮ ಈ ಮಹಾಸಾಧನೆ ಬಗ್ಗೆ ಮಾತನಾಡುವುದನ್ನೇ ಮರೆತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ೨೦೦೦ ಮುಖಬೆಲೆಯ ನೋಟುಗಳು ಕಾಣೆಯಾದವು, ಅದರಲ್ಲಿರುವ ಚಿಪ್ಪುಗಳೂ ಮಾಯವಾದವು! ಕಪ್ಪು ಹಣ ಸಿಗಲಿಲ್ಲ, ಭ್ರಷ್ಟಾಚಾರ ತೊಲಗಲಿಲ್ಲ. ಡಾಲರ್ ಎದುರು ರೂಪಾಯಿ ಕುಸಿಯುವುದು ನಿಲ್ಲಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Home / ರಾಜಕೀಯ / ನೋಟ್ ಬ್ಯಾನ್ನಿಂದ ಆದ ಒಂದೇ ಒಂದು ಪ್ರಯೋಜವಿದ್ದರೆ ಬಿಜೆಪಿ ಉತ್ತರಿಸಲಿ ಎಂದು ಕಾಂಗ್ರೇಸ್ ನೋಟ್ ಬ್ಯಾನ್ ವಿರುದ್ಧ ಸವಾಲು
Check Also
ಮೂಡಲಗಿ | ಕಾರು ಡಿಕ್ಕಿ: ಬಾಲಕ ಸಾವು
Spread the love ಮೂಡಲಗಿ: ತಾಲ್ಲೂಕಿನ ನಾಗನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮೀಪ ಸೋಮವಾರ ಮೂಡಲಗಿ- ಗೋಕಾಕ …