ಮೂಲಭೂತ ಸೌಕರ್ಯಕ್ಕಾಗಿ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು
ಬೆಳೆಗಾವಿಯ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು ಬುಡಾ ಮತ್ತು ಪಾಲಿಕೆ ವಿರುದ್ದ ಪ್ರತಿಭಟನೆ ನಡೆಸಿದರು , ಮಹಾನಗರ ಪಾಲಿಕೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು
1982 ರಲ್ಲಿ ಬಸವನಕುಡಚಿ ದೇವರಾಜ ಅರಸ ಕಾಲೋನಿ ಬುಡಾದಿಂದ ನಿರ್ಮಾಣವಾಗಿದೆ, 40 ವರ್ಷಗಳಿಂದ ದೇವರಾಜ ಅರಸ ಕಾಲೋನಿಯು ಯಾವದೇ ಅಭಿವೃದ್ದಿಯಾಗದೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ , ರಸ್ತೆಗಳು ಸರಿಯಾಗಿಲ್ಲ , ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ , ನೀರಿನ ಸಮಸ್ಯೆ ವಿದೆ , ಈ ಬಗ್ಗೆ ಶಾಸಕರು ಸಂಸದರು ಪಾಲಿಕೆಗೆ ಮನವಿ ಸಲ್ಲಿಸಿದರು ಯಾವದೇ ರೀತಿಯ ಪ್ರಯೋಜನೆ ವಾಗಿಲ್ಲ , ಇನ್ನೂ 15 ದಿನದ ಒಳಗೆ ಎಲ್ಲವೂ ಸರಿಹೋಗದೆ ಇದ್ದರೆ ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡುವುದಾಗಿ ದೇವರಾಜ ಅರಸ ವೆಲ್ಪೇರ್ ಸೊಸೈಟಿಯ ಸದ್ಯಸರು ಹೇಳಿದರು