ಯಮಕನಮರಡಿ: ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಪಾಶ್ಚಾಪೂರ ಗ್ರಾಮದಲ್ಲಿ ನೂತನವಾಗಿ ರಚನೆಯಾದ ಕರ್ನಾಟಕ ರಕ್ಷಣಾ ವೇದಿಕೆ( ಕರವೇ) ನಾರಾಯಣಗೌಡ ಬಣ ಸಂಘಟನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಪುತ್ರ, ಯುವ ನಾಯಕ ರಾಹುಲ್ ಜಾರಕಿಹೊಳಿ ಬುಧವಾರ ಚಾಲನೆ ನೀಡಿದರು.
ಪಾಶ್ಚಾಪೂರ ಗ್ರಾಮದಲ್ಲಿನ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಸಮಾಜದ ಒಳಿತಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ರಾಹುಲ್ ಜಾರಕಿಹೊಳಿ ಬಣ್ಣಿಸಿದರು.
ಇದೇ ವೇಳೆ ಕರವೇ ಕಾರ್ಯಕರ್ತರು ರಾಹುಲ್ ಅವರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಂಜುನಾಥ್ ಪಾಟೀಲ್, ಪರಶುರಾಮ ಬಸನಾಯಿಕ, ಸುರೇಶ ಬಸನಾಯಕ, ಫಜಲ್ ಮಕಾನದಾರ್, ಸಂತೋಷ ಮುತ್ನಾಳ, ಶಿವಾಜಿ ಬಸನಾಯಿಕ, ರಾಜು ದರಗಶೆಟ್ಟಿ, ವಿನೋದ ಡೊಂಗರೆ, ಪಾಂಡು ಮನ್ನಿಕೇರಿ ಮುಂತಾದವರು ಇದ್ದರು.